ವಿಶಾಖಪಟ್ಟಣ: ಸಮುದ್ರದ ಆಳದಲ್ಲಿ ಕಾರ್ಯಾಚರಣೆ ನಡೆಸಲು ನೆರವಾಗುವ ಉದ್ದೇಶಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ಹಾಗೂ ಸ್ವದೇಶಿ ನಿರ್ಮಿತ‘ನಿಸ್ತಾರ್’ ಮತ್ತು ‘ನಿಪುಣ್’ ಹಡಗುಗಳಿಗೆ ಗುರುವಾರ ಇಲ್ಲಿ ಚಾಲನೆ ನೀಡಲಾಯಿತು.
‘ಹಿಂದೂ ಮಹಾಸಾಗರ ಪ್ರದೇಶದಲ್ಲಿ ಜಲಾಂತರ್ಗಾಮಿಯಂತಹ ಕಠಿಣ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಈ ಹಡಗುಗಳು ನೆರವಾಗಲಿವೆ. ಆತ್ಮ ನಿರ್ಭರ ಭಾರತದೆಡೆ ನಾವು ಹೆಜ್ಜೆ ಇಡುತ್ತಿರುವುದಕ್ಕೆ ಇವು ಸಾಕ್ಷಿಯಂತಿವೆ’ ಎಂದು ಭಾರತೀಯ ನೌಕಾಪಡೆಯ ಚೀಫ್ ಅಡ್ಮಿರಲ್ ಆರ್.ಹರಿಕುಮಾರ್ ಹೇಳಿದ್ದಾರೆ.