<p><strong>ಚೆನ್ನೈ:</strong> ರೈಲು ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಿದ ಬಗ್ಗೆ ಎಸ್ಎಂಎಸ್ ಸಂದೇಶ ಹಿಂದಿ ಭಾಷೆಯಲ್ಲಿ ಬರುತ್ತಿದೆ ಎಂದು ಡಿಎಂಕೆ ಮತ್ತು ಪಿಎಂಕೆ ಪಕ್ಷಗಳು ಆಕ್ಷೇಪಿಸಿವೆ. ಇದೂ ಹಿಂದಿ ಹೇರಿಕೆಯೇ ಆಗಿದೆ ಎಂದು ಡಿಎಂಕೆ ಸಂಸದೆ ತಮಿಜಾಚಿ ತಂಗಪಾಂಡಿಯನ್ ಟೀಕಿಸಿದ್ದಾರೆ.</p>.<p>ಹಿಂದಿ ಭಾಷೆಯ ಎಸ್ಎಂಎಸ್ ಸಂದೇಶದ ಚಿತ್ರವನ್ನು ಟ್ವೀಟ್ ಮಾಡಿರುವ ಅವರು, ‘ಹಿಂದಿ ಭಾಷೆ ಹೇರುವುದಿಲ್ಲ ಎಂಬ ಕೇಂದ್ರದ ಭರವಸೆ ನಂತರವೂ ಭಿನ್ನ ಮಾರ್ಗಗಳ ಮೂಲಕ ಇಂಥ ಯತ್ನ ನಡೆದಿದೆ. ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರಿಕೆ ಬೇಡ’ ಎಂದಿದ್ದಾರೆ.</p>.<p>‘ಇದು, ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇ–ಟಿಕೆಟ್ ನೀಡುವ ಅಧಿಕೃತ ಸಂಸ್ಥೆಯಾಗಿರುವ ಐಆರ್ಸಿಟಿಸಿಗೆ ಬರಲಿದೆ’ ಎಂದು ದಕ್ಷಿಣ ರೈಲ್ವೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.</p>.<p>‘ಜನರ ಭಾವನೆ ಗೌರವಿಸದೇ ಹಿಂದಿ ಹೇರಲಾಗುತ್ತಿದೆ’ ಎಂದು ಪಕ್ಷದ ಸಂಸದೆ ಕನಿಮೋಳಿ ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಬೆಂಬಲಿಸುತ್ತಿರುವ ಪಿಎಂಕೆ ಸ್ಥಾಪಕ ಡಾ.ಎಸ್.ರಾಮದಾಸ್ ಅವರು, ‘ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ರೈಲು ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಿದ ಬಗ್ಗೆ ಎಸ್ಎಂಎಸ್ ಸಂದೇಶ ಹಿಂದಿ ಭಾಷೆಯಲ್ಲಿ ಬರುತ್ತಿದೆ ಎಂದು ಡಿಎಂಕೆ ಮತ್ತು ಪಿಎಂಕೆ ಪಕ್ಷಗಳು ಆಕ್ಷೇಪಿಸಿವೆ. ಇದೂ ಹಿಂದಿ ಹೇರಿಕೆಯೇ ಆಗಿದೆ ಎಂದು ಡಿಎಂಕೆ ಸಂಸದೆ ತಮಿಜಾಚಿ ತಂಗಪಾಂಡಿಯನ್ ಟೀಕಿಸಿದ್ದಾರೆ.</p>.<p>ಹಿಂದಿ ಭಾಷೆಯ ಎಸ್ಎಂಎಸ್ ಸಂದೇಶದ ಚಿತ್ರವನ್ನು ಟ್ವೀಟ್ ಮಾಡಿರುವ ಅವರು, ‘ಹಿಂದಿ ಭಾಷೆ ಹೇರುವುದಿಲ್ಲ ಎಂಬ ಕೇಂದ್ರದ ಭರವಸೆ ನಂತರವೂ ಭಿನ್ನ ಮಾರ್ಗಗಳ ಮೂಲಕ ಇಂಥ ಯತ್ನ ನಡೆದಿದೆ. ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರಿಕೆ ಬೇಡ’ ಎಂದಿದ್ದಾರೆ.</p>.<p>‘ಇದು, ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇ–ಟಿಕೆಟ್ ನೀಡುವ ಅಧಿಕೃತ ಸಂಸ್ಥೆಯಾಗಿರುವ ಐಆರ್ಸಿಟಿಸಿಗೆ ಬರಲಿದೆ’ ಎಂದು ದಕ್ಷಿಣ ರೈಲ್ವೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.</p>.<p>‘ಜನರ ಭಾವನೆ ಗೌರವಿಸದೇ ಹಿಂದಿ ಹೇರಲಾಗುತ್ತಿದೆ’ ಎಂದು ಪಕ್ಷದ ಸಂಸದೆ ಕನಿಮೋಳಿ ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಬೆಂಬಲಿಸುತ್ತಿರುವ ಪಿಎಂಕೆ ಸ್ಥಾಪಕ ಡಾ.ಎಸ್.ರಾಮದಾಸ್ ಅವರು, ‘ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>