<p><strong>ಲಖನೌ</strong>: ಮಥುರಾ ಜಿಲ್ಲೆಯ ಪವಿತ್ರ ಗೋವರ್ಧನ ಬೆಟ್ಟದ ಬಂಡೆಗಳ ತುಂಡುಗಳನ್ನು ಅಕ್ರಮವಾಗಿ ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಂಡಿಯನ್ ಇ–ಕಾಮರ್ಸ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಐವರ ವಿರುದ್ಧ ಮಥುರಾ ಜಿಲ್ಲೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.</p>.<p>ಇಲ್ಲಿನ ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣದ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಕಂಪನಿಯ ಸ್ಥಳೀಯವಾಗಿ ಬಂಡೆಗಳ ತುಂಡುಗಳನ್ನು ಸರಬರಾಜು ಮಾಡುತ್ತಿದ್ದವನನ್ನೂ ಬಂಧಿಸಲಾಗಿದೆ.</p>.<p>ಬಂಡೆಗಳ ತುಂಡುಗಳ ಅಕ್ರಮ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸಿದ ಸ್ಥಳೀಯ ನಿವಾಸಿಗಳು, ಭಕ್ತರು, ಸಂತರು, ಇದಕ್ಕೆ ಕಾರಣರಾಗಿರುವ ಇ–ಕಾಮರ್ಸ್ ಕಂಪನಿಯ ಸಿಇಒ ಮತ್ತು ಇತರ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕಾಗಿ ಒತ್ತಾಯಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸದ್ದವು‘ ಎಂದು ಮೂಲಗಳು ತಿಳಿಸಿವೆ.</p>.<p>ಗೋವರ್ಧನ ಬೆಟ್ಟದ ಬಂಡೆಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯ ಜಾಲತಾಣದಲ್ಲಿ ತಮಿಳುನಾಡಿನ ಚೆನ್ನೈ ನಗರದಲ್ಲಿರುವ ಸಂಸ್ಥೆಯ ವಿಳಾಸವನ್ನು ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಡೆ ಒಂದು ನೈಸರ್ಗಿಕ ವಸ್ತುವಾಗಿದ್ದು, ಅದರ ಒಂದು ತುಂಡಿನ ಬೆಲೆ ₹ 5175 ಎಂದು ಜಾಲತಾಣದಲ್ಲಿ ಉಲ್ಲೇಖವಾಗಿದೆ.</p>.<p>ಗೋವರ್ಧನ ಪರ್ವತ ಮತ್ತು ಗಿರಿರಾಜ ಎಂದು ಕರೆಯುವ ಗೋವರ್ಧನ ಬೆಟ್ಟ, ಹಿಂದೂಗಳ ಪವಿತ್ರ ತಾಣ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಗೋವರ್ಧನ್ ಮತ್ತು ರಾಧಾ ಕುಂಡ್ದಲ್ಲಿರುವ ಎಂಟು ಕಿ.ಮೀ ಸುತ್ತಳತೆಯಿರುವ ಬೆಟ್ಟವನ್ನು ಭಕ್ತರು ಏರುತ್ತಾರೆ.</p>.<p>'ಗಿರಿರಾಜ್' ಎಂದೂ ಕರೆಯಲ್ಪಡುವ ಗೋವರ್ಧನ ಬೆಟ್ಟವು ಮಥುರಾದ ವೃಂದಾವನದಿಂದ 20 ಕಿಲೋಮೀಟರ್ ದೂರದಲ್ಲಿದೆ. ಹಿಂದೂ ಪುರಾಣದ ಪ್ರಕಾರ, ಪವಿತ್ರ ಬೆಟ್ಟವನ್ನು ಸ್ವತಃ ಶ್ರೀಕೃಷ್ಣನೆಂದು ಭಕ್ತರು ಪರಿಗಣಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಮಥುರಾ ಜಿಲ್ಲೆಯ ಪವಿತ್ರ ಗೋವರ್ಧನ ಬೆಟ್ಟದ ಬಂಡೆಗಳ ತುಂಡುಗಳನ್ನು ಅಕ್ರಮವಾಗಿ ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಂಡಿಯನ್ ಇ–ಕಾಮರ್ಸ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಐವರ ವಿರುದ್ಧ ಮಥುರಾ ಜಿಲ್ಲೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.</p>.<p>ಇಲ್ಲಿನ ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣದ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಕಂಪನಿಯ ಸ್ಥಳೀಯವಾಗಿ ಬಂಡೆಗಳ ತುಂಡುಗಳನ್ನು ಸರಬರಾಜು ಮಾಡುತ್ತಿದ್ದವನನ್ನೂ ಬಂಧಿಸಲಾಗಿದೆ.</p>.<p>ಬಂಡೆಗಳ ತುಂಡುಗಳ ಅಕ್ರಮ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸಿದ ಸ್ಥಳೀಯ ನಿವಾಸಿಗಳು, ಭಕ್ತರು, ಸಂತರು, ಇದಕ್ಕೆ ಕಾರಣರಾಗಿರುವ ಇ–ಕಾಮರ್ಸ್ ಕಂಪನಿಯ ಸಿಇಒ ಮತ್ತು ಇತರ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕಾಗಿ ಒತ್ತಾಯಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸದ್ದವು‘ ಎಂದು ಮೂಲಗಳು ತಿಳಿಸಿವೆ.</p>.<p>ಗೋವರ್ಧನ ಬೆಟ್ಟದ ಬಂಡೆಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯ ಜಾಲತಾಣದಲ್ಲಿ ತಮಿಳುನಾಡಿನ ಚೆನ್ನೈ ನಗರದಲ್ಲಿರುವ ಸಂಸ್ಥೆಯ ವಿಳಾಸವನ್ನು ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಡೆ ಒಂದು ನೈಸರ್ಗಿಕ ವಸ್ತುವಾಗಿದ್ದು, ಅದರ ಒಂದು ತುಂಡಿನ ಬೆಲೆ ₹ 5175 ಎಂದು ಜಾಲತಾಣದಲ್ಲಿ ಉಲ್ಲೇಖವಾಗಿದೆ.</p>.<p>ಗೋವರ್ಧನ ಪರ್ವತ ಮತ್ತು ಗಿರಿರಾಜ ಎಂದು ಕರೆಯುವ ಗೋವರ್ಧನ ಬೆಟ್ಟ, ಹಿಂದೂಗಳ ಪವಿತ್ರ ತಾಣ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಗೋವರ್ಧನ್ ಮತ್ತು ರಾಧಾ ಕುಂಡ್ದಲ್ಲಿರುವ ಎಂಟು ಕಿ.ಮೀ ಸುತ್ತಳತೆಯಿರುವ ಬೆಟ್ಟವನ್ನು ಭಕ್ತರು ಏರುತ್ತಾರೆ.</p>.<p>'ಗಿರಿರಾಜ್' ಎಂದೂ ಕರೆಯಲ್ಪಡುವ ಗೋವರ್ಧನ ಬೆಟ್ಟವು ಮಥುರಾದ ವೃಂದಾವನದಿಂದ 20 ಕಿಲೋಮೀಟರ್ ದೂರದಲ್ಲಿದೆ. ಹಿಂದೂ ಪುರಾಣದ ಪ್ರಕಾರ, ಪವಿತ್ರ ಬೆಟ್ಟವನ್ನು ಸ್ವತಃ ಶ್ರೀಕೃಷ್ಣನೆಂದು ಭಕ್ತರು ಪರಿಗಣಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>