‘ಪನ್ಬಾರಿ ಮತ್ತು ಠಾಕೂರ್ಕುಚಿ ರೈಲ್ವೆ ನಿಲ್ದಾಣದ ನಡುವಿನ ಸುರಂಗ ನಿರ್ಮಾಣದ ವೇಳೆ ಈ ಘಟನೆ ನಡೆದಿದ್ದು, ಅವಶೇಷಗಳಡಿ 9 ಮಂದಿ ಕಾರ್ಮಿಕರು ಸಿಲುಕಿದ್ದರು. ಸ್ಥಳೀಯ ಅಧಿಕಾರಿಗಳ ಸಹಾಯದಿಂದ 7 ಮಂದಿಯನ್ನು ರಕ್ಷಿಸಲಾಯಿತು. ಆದರೆ ಇಬ್ಬರು ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ’ ಎಂದು ಎನ್ಎಫ್ಆರ್ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶುಭಾನನ ಚಂದಾ ಅವರು ಮಾಹಿತಿ ನೀಡಿದರು.