<p><strong>ಉದಕಮಂಡಲ (ತಮಿಳುನಾಡು):</strong> ತಮಿಳುನಾಡಿನ ಕೃಷ್ಣಗಿರಿ ಸಮೀಪ ಸೆರೆ ಹಿಡಿಯಲಾಗಿದ್ದ 15 ವರ್ಷದ ಆನೆಯನ್ನು ಗುರುವಾರ ಮುಂಜಾನೆ ಸುರಕ್ಷಿತವಾಗಿ ಅಸುವರಮಟ್ಟಂನಲ್ಲಿರುವ ಮುದುಮಲೈ ಹುಲಿ ಸಂರಕ್ಷಿತ ಅರಣ್ಯ (ಎಂಟಿಆರ್) ಪ್ರದೇಶಕ್ಕೆ ಬಿಡಲಾಗಿದೆ.</p>.<p>ಈ ಗಂಡು ಆನೆ ಕೆಲವು ದಿನಗಳಿಂದ ಕೃಷ್ಣಗಿರಿ ಸುತ್ತಮುತ್ತಾ ತೀವ್ರ ಉಪಟಳ ನೀಡುತ್ತಿತ್ತು. ಅರಣ್ಯಾಧಿಕಾರಿಗಳ ಸತತ ಪ್ರಯತ್ನದ ನಂತರ 48 ಗಂಟೆಗಳ ಹಿಂದೆ, ಆನೆಯನ್ನು ಹಿಡಿಯಲಾಯಿತು. ಈಗ ಅದನ್ನು ಎಂಟಿಆರ್ ಅರಣ್ಯದೊಳಕ್ಕೆ ಬಿಡಲಾಗಿದೆ.</p>.<p>ಸೌಮ್ಯ ಸ್ವಭಾವದ ಆನೆಯ ಚಲನವಲನಗಳನ್ನು ಅರಣ್ಯ ಅಧಿಕಾರಿಗಳ ತಂಡದವರು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.</p>.<p>ಅಸುವರಮಟ್ಟಂ ಅರಣ್ಯದಲ್ಲಿ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಕೊಳವನ್ನು ನಿರ್ಮಿಸಲಾಗಿದೆ. ಇದಕ್ಕೆ ಸೌರಶಕ್ತಿ ಚಾಲಿತ ಮೋಟಾರ್ನಿಂದ ಕೊಳವೆಬಾವಿಯ ನೀರನ್ನು ತುಂಬಿಸಲಾಗುತ್ತದೆ. ಹೀಗಾಗಿ ಆನೆಯಂತಹ ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉದಕಮಂಡಲ (ತಮಿಳುನಾಡು):</strong> ತಮಿಳುನಾಡಿನ ಕೃಷ್ಣಗಿರಿ ಸಮೀಪ ಸೆರೆ ಹಿಡಿಯಲಾಗಿದ್ದ 15 ವರ್ಷದ ಆನೆಯನ್ನು ಗುರುವಾರ ಮುಂಜಾನೆ ಸುರಕ್ಷಿತವಾಗಿ ಅಸುವರಮಟ್ಟಂನಲ್ಲಿರುವ ಮುದುಮಲೈ ಹುಲಿ ಸಂರಕ್ಷಿತ ಅರಣ್ಯ (ಎಂಟಿಆರ್) ಪ್ರದೇಶಕ್ಕೆ ಬಿಡಲಾಗಿದೆ.</p>.<p>ಈ ಗಂಡು ಆನೆ ಕೆಲವು ದಿನಗಳಿಂದ ಕೃಷ್ಣಗಿರಿ ಸುತ್ತಮುತ್ತಾ ತೀವ್ರ ಉಪಟಳ ನೀಡುತ್ತಿತ್ತು. ಅರಣ್ಯಾಧಿಕಾರಿಗಳ ಸತತ ಪ್ರಯತ್ನದ ನಂತರ 48 ಗಂಟೆಗಳ ಹಿಂದೆ, ಆನೆಯನ್ನು ಹಿಡಿಯಲಾಯಿತು. ಈಗ ಅದನ್ನು ಎಂಟಿಆರ್ ಅರಣ್ಯದೊಳಕ್ಕೆ ಬಿಡಲಾಗಿದೆ.</p>.<p>ಸೌಮ್ಯ ಸ್ವಭಾವದ ಆನೆಯ ಚಲನವಲನಗಳನ್ನು ಅರಣ್ಯ ಅಧಿಕಾರಿಗಳ ತಂಡದವರು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.</p>.<p>ಅಸುವರಮಟ್ಟಂ ಅರಣ್ಯದಲ್ಲಿ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಕೊಳವನ್ನು ನಿರ್ಮಿಸಲಾಗಿದೆ. ಇದಕ್ಕೆ ಸೌರಶಕ್ತಿ ಚಾಲಿತ ಮೋಟಾರ್ನಿಂದ ಕೊಳವೆಬಾವಿಯ ನೀರನ್ನು ತುಂಬಿಸಲಾಗುತ್ತದೆ. ಹೀಗಾಗಿ ಆನೆಯಂತಹ ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>