ವಕೀಲರಾದ ಆರ್. ಸತ್ಯನಾರಾಯಣ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, ‘ಸಾರ್ವಜನಿಕ ವಲಯದ ಕೆಲವು ಉದ್ಯಮಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯ ಕುರಿತು ಪತಿ ಆನಂದ್ ಅವರು ಬರೆದ ಲೇಖನವೊಂದು ಮಾರ್ಚ್ 10ರಂದು ‘ಕಾರವಾನ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದರ ನಂತರ ಜೈಲಿನ ಅಧೀಕ್ಷಕರು ಆನಂದ್ ಅವರ ಪತ್ರಗಳನ್ನು ಉದ್ದೇಶಪೂರ್ವಕಾಗಿ ತಡೆಹಿಡಿದು, ವಿಳಂಬವಾಗಿ ಪೋಸ್ಟ್ ಮಾಡುತ್ತಿದ್ದಾರೆ’ ಎಂದು ರಮಾ ಅವರು ಆರೋಪಿಸಿದ್ದಾರೆ.