ಆದ್ದರಿಂದ, ಹಿಂಬಾಕಿಯೂ ಸೇರಿದಂತೆ ರಾಜ್ಯಕ್ಕೆ ಮಾಸಿಕವಾಗಿ ನಿಗದಿಯಾಗಿರುವಷ್ಟು ರಸಗೊಬ್ಬರ ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ. ಮೇ, ಜೂನ್, ಜುಲೈನಲ್ಲಿ ರಸಗೊಬ್ಬರಕ್ಕೆ ಗರಿಷ್ಠ ಬೇಡಿಕೆಯತ್ತು. ಆದರೆ ಈ ಅವಧಿಯಲ್ಲಿ ಗೊಬ್ಬರ ಪೂರೈಕೆ ಪ್ರಮಾಣ ಕುಸಿದಿತ್ತು ಎಂಬುದನ್ನು ಅವರು ಪತ್ರದ ಮೂಲಕ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.