<p><strong>ಲಖನೌ:</strong>ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಪ್ರಮುಖ ರಾಜಕೀಯ ಪಕ್ಷಗಳು ಜಾತಿ ಸಮೀಕರಣದ ಹೊಂದಾಣಿಕೆಯಲ್ಲಿ ತೊಡಗಿವೆ. ರಾಜ್ಯದ ಪ್ರಭಾವಿ ಸಮುದಾಯ ಎನಿಸಿರುವ ‘ಬ್ರಾಹ್ಮಣ’ರ ಮೇಲೆ ಎಲ್ಲರ ಕಣ್ಣು ಬಿದ್ದಿದೆ.</p>.<p>ಕಾಂಗ್ರೆಸ್ ಪಕ್ಷವು ‘ಬ್ರಾಹ್ಮಣ ಚೇತನ ಪರಿಷತ್’ ಘಟಕದ ಮೂಲಕ ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಯಾತ್ರೆ ನಡೆಸುತ್ತಿದೆ. ‘ಸಮುದಾಯದ ನ್ಯಾಯಕ್ಕಾಗಿ ಅಭಿಯಾನ’ ಎಂದು ಇದನ್ನು ಕರೆದಿದೆ.2007ರಲ್ಲಿ ಬ್ರಾಹ್ಮಣ ಮತ್ತು ದಲಿತ ಸಮೀಕರಣವನ್ನು ಪ್ರಯೋಗಿಸಿ ಅಧಿಕಾರ ಹಿಡಿದಿದ್ದ ಬಿಎಸ್ಪಿ, ಈ ಬಾರಿ ಸಮುದಾಯದ ಓಲೈಕೆಗಾಗಿ ‘ಪ್ರಬುದ್ಧ ಸಮ್ಮೇಳನ’ಗಳನ್ನು ಬ್ರಾಹ್ಮಣರಿಗಾಗಿ ಆಯೋಜಿಸಿದೆ.</p>.<p>ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಾಗಿ ಕಾಂಗ್ರೆಸ್ ಈಗಾಗಲೇ ಸುಳಿವು ನೀಡಿದೆ. ಈ ವಿಚಾರದಲ್ಲಿ ತಾನೇನೂ ಹಿಂದೆ ಬೀಳದ ಬಿಜೆಪಿ, ‘ಪ್ರಬುದ್ಧ ವರ್ಗ ಸಮ್ಮೇಳನ’ಗಳ ಸರಣಿಯನ್ನೇ ಆಯೋಜಿಸಿದೆ.</p>.<p>ಸಮಾಜವಾದಿ ಪಕ್ಷವು ರಾಜ್ಯದ ವಿವಿಧ ಭಾಗಗಳಲ್ಲಿ ಪರಶುರಾಮನ ಪ್ರತಿಮೆಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಎಲ್ಲ 403 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಆಮ್ ಆದ್ಮಿ ಪಕ್ಷವು, ‘ಚಾಣಕ್ಯ ವಿಚಾರ ಸಮ್ಮೇಳನ’ಗಳನ್ನು ಆಯೋಜಿಸುವ ಉದ್ದೇಶ ಹೊಂದಿದೆ.</p>.<p>ರಾಜ್ಯದಲ್ಲಿ ಶೇ 13ರಷ್ಟಿರುವ ಬ್ರಾಹ್ಮಣರನ್ನು ಈ ಬಾರಿ ಯಾವ ಪಕ್ಷ ಸೆಳೆಯಲಿದೆ ಎಂಬುದುನ್ನು ಕಾದುನೋಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong>ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಪ್ರಮುಖ ರಾಜಕೀಯ ಪಕ್ಷಗಳು ಜಾತಿ ಸಮೀಕರಣದ ಹೊಂದಾಣಿಕೆಯಲ್ಲಿ ತೊಡಗಿವೆ. ರಾಜ್ಯದ ಪ್ರಭಾವಿ ಸಮುದಾಯ ಎನಿಸಿರುವ ‘ಬ್ರಾಹ್ಮಣ’ರ ಮೇಲೆ ಎಲ್ಲರ ಕಣ್ಣು ಬಿದ್ದಿದೆ.</p>.<p>ಕಾಂಗ್ರೆಸ್ ಪಕ್ಷವು ‘ಬ್ರಾಹ್ಮಣ ಚೇತನ ಪರಿಷತ್’ ಘಟಕದ ಮೂಲಕ ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಯಾತ್ರೆ ನಡೆಸುತ್ತಿದೆ. ‘ಸಮುದಾಯದ ನ್ಯಾಯಕ್ಕಾಗಿ ಅಭಿಯಾನ’ ಎಂದು ಇದನ್ನು ಕರೆದಿದೆ.2007ರಲ್ಲಿ ಬ್ರಾಹ್ಮಣ ಮತ್ತು ದಲಿತ ಸಮೀಕರಣವನ್ನು ಪ್ರಯೋಗಿಸಿ ಅಧಿಕಾರ ಹಿಡಿದಿದ್ದ ಬಿಎಸ್ಪಿ, ಈ ಬಾರಿ ಸಮುದಾಯದ ಓಲೈಕೆಗಾಗಿ ‘ಪ್ರಬುದ್ಧ ಸಮ್ಮೇಳನ’ಗಳನ್ನು ಬ್ರಾಹ್ಮಣರಿಗಾಗಿ ಆಯೋಜಿಸಿದೆ.</p>.<p>ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಾಗಿ ಕಾಂಗ್ರೆಸ್ ಈಗಾಗಲೇ ಸುಳಿವು ನೀಡಿದೆ. ಈ ವಿಚಾರದಲ್ಲಿ ತಾನೇನೂ ಹಿಂದೆ ಬೀಳದ ಬಿಜೆಪಿ, ‘ಪ್ರಬುದ್ಧ ವರ್ಗ ಸಮ್ಮೇಳನ’ಗಳ ಸರಣಿಯನ್ನೇ ಆಯೋಜಿಸಿದೆ.</p>.<p>ಸಮಾಜವಾದಿ ಪಕ್ಷವು ರಾಜ್ಯದ ವಿವಿಧ ಭಾಗಗಳಲ್ಲಿ ಪರಶುರಾಮನ ಪ್ರತಿಮೆಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಎಲ್ಲ 403 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಆಮ್ ಆದ್ಮಿ ಪಕ್ಷವು, ‘ಚಾಣಕ್ಯ ವಿಚಾರ ಸಮ್ಮೇಳನ’ಗಳನ್ನು ಆಯೋಜಿಸುವ ಉದ್ದೇಶ ಹೊಂದಿದೆ.</p>.<p>ರಾಜ್ಯದಲ್ಲಿ ಶೇ 13ರಷ್ಟಿರುವ ಬ್ರಾಹ್ಮಣರನ್ನು ಈ ಬಾರಿ ಯಾವ ಪಕ್ಷ ಸೆಳೆಯಲಿದೆ ಎಂಬುದುನ್ನು ಕಾದುನೋಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>