<p><strong>ನವದೆಹಲಿ (ಪಿಟಿಐ):</strong> ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿಯ ಹೆಂಡತಿಯ ಕಾರಿನಲ್ಲಿ ಮತಯಂತ್ರ ಸಿಕ್ಕಿದ ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಶುಕ್ರವಾರ ಪ್ರಶ್ನಿಸಿದೆ. ಆಯೋಗವು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತು ಇಂತಹ ಕೃತ್ಯಗಳಲ್ಲಿ ಶಾಮೀಲಾಗುವುದನ್ನು ಮುಂದುವರಿಸಿದರೆ ಪ್ರಜಾಪ್ರಭುತ್ವಕ್ಕೆ ಮಾರಣಾಂತಿಕ ಹೊಡೆತ ಬೀಳುತ್ತದೆ ಎಂದು ಕಾಂಗ್ರೆಸ್ ಹೇಳಿದೆ.</p>.<p>ಬಿಜೆಪಿ ಅಭ್ಯರ್ಥಿಯ ಹೆಂಡತಿಯ ಕಾರಿನಲ್ಲಿ ಮತಯಂತ್ರ ಪತ್ತೆಯಾದ ವಿಡಿಯೊವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.</p>.<p>ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಆಯೋಗದ ಕಾರು ಹಾಳಾಗಿದೆ. ಬಿಜೆಪಿಯ ಉದ್ದೇಶ ಕೆಟ್ಟದ್ದು ಮತ್ತು ಪ್ರಜಾಪ್ರಭುತ್ವದ ಸ್ಥಿತಿ ಶೋಚನೀಯ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.</p>.<p>ಅಸ್ಸಾಂನಲ್ಲಿ ಭಾರಿ ಸೋಲು ಕಾದಿದೆ ಎಂಬುದು ಬಿಜೆಪಿಗೆ ಅರಿವಾಗಿದೆ. ಹಾಗಾಗಿಯೇ ಆ ಪಕ್ಷವು ಹೇಳಲಾಗದಷ್ಟು ದಿಗಿಲುಗೊಂಡಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.</p>.<p>‘ಹತಾಶೆಯ ಕೊನೆಯ ಕ್ರಮವೇ ಮತಯಂತ್ರ ಕಳ್ಳತನ. ಮತಯಂತ್ರವು ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಅವರ ಕಾರಿನಲ್ಲಿ ಹೇಗೆ ಬಂತು? ಅಸ್ಸಾಂನ ದಿಫು ಬಳಿಯ ಹಾತಿಪುರ ಮತಗಟ್ಟೆಯ ಬಳಿ ಐಷಾರಾಮಿ ಕಾರಿನ ಡಿಕ್ಕಿಯಲ್ಲಿ ಮತಯಂತ್ರ ಇರಿಸಿದ್ದು ಏಕೆ? ಆಯೋಗವು ಉತ್ತರಿಸುತ್ತದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.</p>.<p>ಭದ್ರತಾ ಸಿಬ್ಬಂದಿ ಇಲ್ಲದೆಯೇ ಮತಯಂತ್ರಗಳನ್ನು ಒಯ್ದದ್ದು ಏಕೆ? ಕಾಲೈಗಾಂವ್ ಮತಗಟ್ಟೆಯಿಂದ ಮತಯಂತ್ರ ಮಾಯವಾಗಿತ್ತು ಎಂದು ಮತದಾರರು ದೂರಿದ್ದು ನಿಜವೇ? ಯಾವ ತನಿಖೆ ನಡೆದಿದೆ? ಯಾವ ಕ್ರಮ ಕೈಗೊಳ್ಳಲಾಗಿದೆ? ಮತಯಂತ್ರಗಳನ್ನು ಇರಿಸಿದ ದಿಬ್ರುಗಡದ ಕೊಠಡಿಯಲ್ಲಿ ಅನುಮಾನಾಸ್ಪದ ಅಧಿಕಾರಿಯೊಬ್ಬರು ಇದ್ದದ್ದು ಹೌದೇ? ಈ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ... ಹೀಗೆ ಹಲವು ಪ್ರಶ್ನೆಗಳನ್ನು ಅವರು ಕೇಳಿದ್ದಾರೆ.</p>.<p>139 ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಕೇಳಿದ್ದಾರೆ.</p>.<p>ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಚುನಾವಣೆಗಳು ಮತ್ತು ಮತಯಂತ್ರ ಸುರಕ್ಷತೆಯ ಬಗ್ಗೆ ಆಯೋಗವು ಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿಯ ಹೆಂಡತಿಯ ಕಾರಿನಲ್ಲಿ ಮತಯಂತ್ರ ಸಿಕ್ಕಿದ ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಶುಕ್ರವಾರ ಪ್ರಶ್ನಿಸಿದೆ. ಆಯೋಗವು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತು ಇಂತಹ ಕೃತ್ಯಗಳಲ್ಲಿ ಶಾಮೀಲಾಗುವುದನ್ನು ಮುಂದುವರಿಸಿದರೆ ಪ್ರಜಾಪ್ರಭುತ್ವಕ್ಕೆ ಮಾರಣಾಂತಿಕ ಹೊಡೆತ ಬೀಳುತ್ತದೆ ಎಂದು ಕಾಂಗ್ರೆಸ್ ಹೇಳಿದೆ.</p>.<p>ಬಿಜೆಪಿ ಅಭ್ಯರ್ಥಿಯ ಹೆಂಡತಿಯ ಕಾರಿನಲ್ಲಿ ಮತಯಂತ್ರ ಪತ್ತೆಯಾದ ವಿಡಿಯೊವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.</p>.<p>ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಆಯೋಗದ ಕಾರು ಹಾಳಾಗಿದೆ. ಬಿಜೆಪಿಯ ಉದ್ದೇಶ ಕೆಟ್ಟದ್ದು ಮತ್ತು ಪ್ರಜಾಪ್ರಭುತ್ವದ ಸ್ಥಿತಿ ಶೋಚನೀಯ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.</p>.<p>ಅಸ್ಸಾಂನಲ್ಲಿ ಭಾರಿ ಸೋಲು ಕಾದಿದೆ ಎಂಬುದು ಬಿಜೆಪಿಗೆ ಅರಿವಾಗಿದೆ. ಹಾಗಾಗಿಯೇ ಆ ಪಕ್ಷವು ಹೇಳಲಾಗದಷ್ಟು ದಿಗಿಲುಗೊಂಡಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.</p>.<p>‘ಹತಾಶೆಯ ಕೊನೆಯ ಕ್ರಮವೇ ಮತಯಂತ್ರ ಕಳ್ಳತನ. ಮತಯಂತ್ರವು ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಅವರ ಕಾರಿನಲ್ಲಿ ಹೇಗೆ ಬಂತು? ಅಸ್ಸಾಂನ ದಿಫು ಬಳಿಯ ಹಾತಿಪುರ ಮತಗಟ್ಟೆಯ ಬಳಿ ಐಷಾರಾಮಿ ಕಾರಿನ ಡಿಕ್ಕಿಯಲ್ಲಿ ಮತಯಂತ್ರ ಇರಿಸಿದ್ದು ಏಕೆ? ಆಯೋಗವು ಉತ್ತರಿಸುತ್ತದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.</p>.<p>ಭದ್ರತಾ ಸಿಬ್ಬಂದಿ ಇಲ್ಲದೆಯೇ ಮತಯಂತ್ರಗಳನ್ನು ಒಯ್ದದ್ದು ಏಕೆ? ಕಾಲೈಗಾಂವ್ ಮತಗಟ್ಟೆಯಿಂದ ಮತಯಂತ್ರ ಮಾಯವಾಗಿತ್ತು ಎಂದು ಮತದಾರರು ದೂರಿದ್ದು ನಿಜವೇ? ಯಾವ ತನಿಖೆ ನಡೆದಿದೆ? ಯಾವ ಕ್ರಮ ಕೈಗೊಳ್ಳಲಾಗಿದೆ? ಮತಯಂತ್ರಗಳನ್ನು ಇರಿಸಿದ ದಿಬ್ರುಗಡದ ಕೊಠಡಿಯಲ್ಲಿ ಅನುಮಾನಾಸ್ಪದ ಅಧಿಕಾರಿಯೊಬ್ಬರು ಇದ್ದದ್ದು ಹೌದೇ? ಈ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ... ಹೀಗೆ ಹಲವು ಪ್ರಶ್ನೆಗಳನ್ನು ಅವರು ಕೇಳಿದ್ದಾರೆ.</p>.<p>139 ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಕೇಳಿದ್ದಾರೆ.</p>.<p>ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಚುನಾವಣೆಗಳು ಮತ್ತು ಮತಯಂತ್ರ ಸುರಕ್ಷತೆಯ ಬಗ್ಗೆ ಆಯೋಗವು ಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>