ಈ ಆರೋಪವನ್ನು ತಳ್ಳಿ ಹಾಕಿರುವ ಸ್ಥಳೀಯ ಬಿಜೆಪಿ ನಾಯಕ ಆಶಿಶ್ ಶೆಲಾರ್, ಪ್ರತಿಮೆ ತೆರವುಗೊಳಿಸಲು ಸ್ಥಳೀಯ ಕಾಂಗ್ರೆಸ್ ಶಾಸಕರೇ ಆದೇಶಿಸಿದ್ದರು ಎಂದಿದ್ದಾರೆ. ‘ಪ್ರತಿಮೆ ತೆರವುಗೊಳಿಸಿರುವುದನ್ನು ನಾವು ಖಂಡಿಸುತ್ತೇವೆ. ಪ್ರತಿಮೆಯನ್ನು ಗೌರವಯುತವಾಗಿ ಮತ್ತೆ ಸ್ಥಾಪಿಸಬೇಕು. ಆದರೆ, ಪ್ರತಿಮೆ ತೆರವುಗೊಳಿಸಲು ಆದೇಶಿಸಿದ ಕಾಂಗ್ರೆಸ್ ಶಾಸಕನ ವಿರುದ್ಧ ಶಿವಸೇನಾ ಪ್ರತಿಭಟನೆ ನಡೆಸಲು ಸಿದ್ಧವಿದೆಯೇ’ ಎಂದು ಪ್ರಶ್ನಿಸಿದ್ದಾರೆ.