ಮೃತ ರೈತರನ್ನು ಬತ್ತಿಂಡ ಜಿಲ್ಲೆಯ ತುಂಗ್ವಾಲಿ ಹಳ್ಳಿಯ ನಿವಾಸಿ ಜೈಸಿಂಗ್ ಎಂದು ಗುರುತಿಸಲಾಗಿದೆ. ಇವರ ಸಹೋದರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣ–ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘ(ಬಿಕೆಯು–ಏಕ್ತಾ ಉಗ್ರಹಾನ್) ಮುಖಂಡ ಶಿಂಗಾರ್ ಸಿಂಗ್ ತಿಳಿಸಿದ್ದಾರೆ.