ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡುವ ಬಗ್ಗೆ ಲಿಖಿತ ಪ್ರಸ್ತಾವಗಳನ್ನು ಮಂಗಳವಾರದ ಸಭೆಯಲ್ಲಿ ಶಾ ಮುಂದಿಟ್ಟಿದ್ದರು. ಸರ್ಕಾರದ ಈ ಪ್ರಸ್ತಾವಗಳನ್ನು ಅಧ್ಯಯನ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಮತ್ತು ಬುಧವಾರದ ಸಭೆಗೆ ಹಾಜರಾಗುವುದಿಲ್ಲ ಎಂದು ರೈತ ಮುಖಂಡರು ತಿಳಿಸಿದ್ದರು.