<div dir="ltr"><p class="bodytext" style="margin-bottom:0in;line-height:100%;"><strong>ನವದೆಹಲಿ</strong>: ಕೃಷಿಯ ಮೂರು ತಿದ್ದುಪಡಿ ಕಾಯ್ದೆಗಳ ವಾಪಸಾತಿಗೆ ಆಗ್ರಹಪಡಿಸಿ ಏಳು ತಿಂಗಳಿನಿಂದ ಪ್ರತಿಭಟಿಸುತ್ತಿರುವ ರೈತರು, ‘ಷರತ್ತುಬದ್ಧ ಮಾತುಕತೆ’ಗೆ ಆಹ್ವಾನಿಸಿರುವ ಕೇಂದ್ರ ಸರ್ಕಾರದ ಮನವಿಯನ್ನು ಶುಕ್ರವಾರ ತಳ್ಳಿಹಾಕಿದ್ದಾರೆ.</p><p>‘ಸರ್ಕಾರ ಈಗ ಷರತ್ತುಬದ್ಧ ಮಾತುಕತೆ ಬಯಸುತ್ತಿದೆ. ನಮಗೆ ಇಂತಹ ಷರತ್ತುಗಳು ಬೇಕಾಗಿಲ್ಲ’ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಯಾಯತ್ ಸ್ಪಷ್ಟಪಡಿಸಿದರು.</p><p>ಸಂಸತ್ತಿನಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ತಿದ್ದುಪಡಿಯಾದ ಮೂರು ಕೃಷಿ ಕಾಯ್ದೆಗಳ ವಾಪಸಾತಿಗೆ ಆಗ್ರಹಿಸಿ ಪ್ರತಿಭಟಿಸುತ್ತಿರುವ ರೈತರು ಮೋದಿ ಸರ್ಕಾರದ ಮನವಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದರು.</p><p>ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ಈಗ ₹ 1 ಲಕ್ಷ ಕೋಟಿಯಷ್ಟು ಕೃಷಿ ಮೂಲಸೌಕರ್ಯ ನಿಧಿ ಹೊಂದಲು ಅರ್ಹವಾಗಿವೆ ಎಂದು ಗುರುವಾರ ಪ್ರಕಟಿಸಿದ್ದರು.</p><p>ಈ ಮೊತ್ತವನ್ನು ಎಪಿಎಂಸಿಗಳ ಅಭಿವೃದ್ಧಿಗೆ ಬಳಸಲಾಗುವುದು. ಹೀಗಾಗಿ, ಎಪಿಎಂಸಿಗಳು ಬಂದ್ ಆಗಲಿವೆ ಎಂಬ ಆತಂಕ ಅನಗತ್ಯ ಎಂದು ತೋಮರ್ ಪ್ರತಿಪಾದಿಸಿದ್ದರು. ಇದು, ಎಪಿಎಂಸಿ ಬಲಪಡಿಸುವ ಮೋದಿ ಸರ್ಕಾರದ ಚಿಂತನೆಯನ್ನು ಬಿಂಬಲಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು.</p><p>ಆದರೆ, ಕೃಷಿಕರ ಮುಖಂಡ ರಾಕೇಶ್ ಟಿಕಾಯತ್ ಸರ್ಕಾರದ ವಾದವನ್ನು ತಳ್ಳಿಹಾಕಿದ್ದು, ಖಾಸಗಿ ಮಾರುಕಟ್ಟೆಗಳಿಗೆ ಅವಕಾಶ ನೀಡುವುದರಿಂದ ಎಪಿಎಂಸಿಗಳು ಅಷ್ಟು ವಹಿವಾಟು ನಡೆಸಲು ಆಗುವುದಿಲ್ಲ ಎಂದು ಹೇಳಿದ್ದರು. ಮಧ್ಯಪ್ರದೇಶದಲ್ಲಿಯೇ 38 ಎಪಿಎಂಸಿಗಳು ಈ ಹಂಗಾಮಿನಲ್ಲಿ ಒಂದು ಕ್ವಿಂಟಾಲ್ ಗೋಧಿ ವಹಿವಾಟನ್ನೂ ನಡೆಸಿಲ್ಲ ಎಂದು ಹೇಳಿದರು.</p></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div dir="ltr"><p class="bodytext" style="margin-bottom:0in;line-height:100%;"><strong>ನವದೆಹಲಿ</strong>: ಕೃಷಿಯ ಮೂರು ತಿದ್ದುಪಡಿ ಕಾಯ್ದೆಗಳ ವಾಪಸಾತಿಗೆ ಆಗ್ರಹಪಡಿಸಿ ಏಳು ತಿಂಗಳಿನಿಂದ ಪ್ರತಿಭಟಿಸುತ್ತಿರುವ ರೈತರು, ‘ಷರತ್ತುಬದ್ಧ ಮಾತುಕತೆ’ಗೆ ಆಹ್ವಾನಿಸಿರುವ ಕೇಂದ್ರ ಸರ್ಕಾರದ ಮನವಿಯನ್ನು ಶುಕ್ರವಾರ ತಳ್ಳಿಹಾಕಿದ್ದಾರೆ.</p><p>‘ಸರ್ಕಾರ ಈಗ ಷರತ್ತುಬದ್ಧ ಮಾತುಕತೆ ಬಯಸುತ್ತಿದೆ. ನಮಗೆ ಇಂತಹ ಷರತ್ತುಗಳು ಬೇಕಾಗಿಲ್ಲ’ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಯಾಯತ್ ಸ್ಪಷ್ಟಪಡಿಸಿದರು.</p><p>ಸಂಸತ್ತಿನಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ತಿದ್ದುಪಡಿಯಾದ ಮೂರು ಕೃಷಿ ಕಾಯ್ದೆಗಳ ವಾಪಸಾತಿಗೆ ಆಗ್ರಹಿಸಿ ಪ್ರತಿಭಟಿಸುತ್ತಿರುವ ರೈತರು ಮೋದಿ ಸರ್ಕಾರದ ಮನವಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದರು.</p><p>ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ಈಗ ₹ 1 ಲಕ್ಷ ಕೋಟಿಯಷ್ಟು ಕೃಷಿ ಮೂಲಸೌಕರ್ಯ ನಿಧಿ ಹೊಂದಲು ಅರ್ಹವಾಗಿವೆ ಎಂದು ಗುರುವಾರ ಪ್ರಕಟಿಸಿದ್ದರು.</p><p>ಈ ಮೊತ್ತವನ್ನು ಎಪಿಎಂಸಿಗಳ ಅಭಿವೃದ್ಧಿಗೆ ಬಳಸಲಾಗುವುದು. ಹೀಗಾಗಿ, ಎಪಿಎಂಸಿಗಳು ಬಂದ್ ಆಗಲಿವೆ ಎಂಬ ಆತಂಕ ಅನಗತ್ಯ ಎಂದು ತೋಮರ್ ಪ್ರತಿಪಾದಿಸಿದ್ದರು. ಇದು, ಎಪಿಎಂಸಿ ಬಲಪಡಿಸುವ ಮೋದಿ ಸರ್ಕಾರದ ಚಿಂತನೆಯನ್ನು ಬಿಂಬಲಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು.</p><p>ಆದರೆ, ಕೃಷಿಕರ ಮುಖಂಡ ರಾಕೇಶ್ ಟಿಕಾಯತ್ ಸರ್ಕಾರದ ವಾದವನ್ನು ತಳ್ಳಿಹಾಕಿದ್ದು, ಖಾಸಗಿ ಮಾರುಕಟ್ಟೆಗಳಿಗೆ ಅವಕಾಶ ನೀಡುವುದರಿಂದ ಎಪಿಎಂಸಿಗಳು ಅಷ್ಟು ವಹಿವಾಟು ನಡೆಸಲು ಆಗುವುದಿಲ್ಲ ಎಂದು ಹೇಳಿದ್ದರು. ಮಧ್ಯಪ್ರದೇಶದಲ್ಲಿಯೇ 38 ಎಪಿಎಂಸಿಗಳು ಈ ಹಂಗಾಮಿನಲ್ಲಿ ಒಂದು ಕ್ವಿಂಟಾಲ್ ಗೋಧಿ ವಹಿವಾಟನ್ನೂ ನಡೆಸಿಲ್ಲ ಎಂದು ಹೇಳಿದರು.</p></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>