ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live Updates | ಉತ್ತರಾಖಂಡ ಹಿಮಪಾತ: ಎನ್‌ಟಿಪಿಸಿಯಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯ ಸ್ಥಗಿತ
LIVE

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ಪರಿಣಾಮವಾಗಿ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 150 ಕ್ಕೂ ಹೆಚ್ಚು ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಸ್ಥಿತಿ ಅವಲೋಕಿಸುತ್ತಿದ್ದು, ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ.
Last Updated 7 ಫೆಬ್ರುವರಿ 2021, 21:23 IST
ಅಕ್ಷರ ಗಾತ್ರ
21:2207 Feb 2021

ರಕ್ಷಣಾ ಕಾರ್ಯಕ್ಕೆ ವಾಯುಪಡೆಯ ನಿಯೋಜನೆ 

ರಕ್ಷಣಾ ಕಾರ್ಯಕ್ಕೆ ವಾಯುಪಡೆಯ ನಿಯೋಜನೆ 

16:5307 Feb 2021

ನೀರಿನ ಮಟ್ಟ ಏರಿಕೆ ಎನ್‌ಟಿಪಿಸಿಯಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯ ಸ್ಥಗಿತ

ಎನ್‌ಟಿಪಿಸಿಯ 900 ಮೀಟರ್ ಉದ್ದದ ಸುರಂಗದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯವನ್ನು ನೀರಿನ ಮಟ್ಟ ಏರಿಕೆಯಿಂದಾಗಿ ಸ್ಥಗಿತಗೊಳಿಸಬೇಕಾಗಿದೆ ಎಂದು ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.
(ಪಿಐಬಿ ಮಾಹಿತಿ) 

16:3507 Feb 2021
16:2807 Feb 2021

ದುರಂತದ ಸಮಯದಲ್ಲಿ ಕಾಂಗ್ರೆಸ್ ಉತ್ತರಾಖಂಡದೊಂದಿಗೆ ನಿಲ್ಲಲಿದೆ: ಸೋನಿಯಾ ಗಾಂಧಿ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿರುವ ಹಿಮಪಾತದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಪಕ್ಷದ ಕಾರ್ಯಕರ್ತರು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಿಗೆ ನೆರವಾಗಬೇಕು ಎಂದು ಕರೆ ನೀಡಿದ್ದಾರೆ.

15:3007 Feb 2021
15:2907 Feb 2021
15:1607 Feb 2021
14:3307 Feb 2021

ಕಾಣೆಯಾದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಐವರು ಸ್ಥಳೀಯರು ಸೇರಿದಂತೆ 180 ಕುರಿಗಳು ಮತ್ತು ಮೇಕೆಗಳೊಂದಿಗೆ ಕುರಿಗಾಹಿಗಳು ಪ್ರವಾಹದಲ್ಲಿ ಮುಳುಗಿದ್ದಾರೆ. ಪ್ರವಾಹದಲ್ಲಿ ಸುಮಾರು 125 ಜನರು ಕಾಣೆಯಾಗಿದ್ದಾರೆ ಎಂದು ನಾವು ಊಹಿಸುತ್ತಿದ್ದೇವೆ. ಈ ಸಂಖ್ಯೆಯು ಹೆಚ್ಚಾಗಬಹುದು. ವಿಕೋಪದ ಹಿಂದಿನ ಕಾರಣವನ್ನು ತಜ್ಞರಷ್ಟೇ ಹೇಳಬಹುದಾಗಿದೆ. ಆದರೆ ನಮ್ಮ ಸರ್ಕಾರ ಇದೀಗ ಜನರ ಜೀವ ಉಳಿಸುವತ್ತ ಗಮನ ಹರಿಸಿದೆ: ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್

14:3007 Feb 2021
14:2907 Feb 2021