ರಕ್ಷಣಾ ಕಾರ್ಯಕ್ಕೆ ವಾಯುಪಡೆಯ ನಿಯೋಜನೆ
ಎನ್ಟಿಪಿಸಿಯ 900 ಮೀಟರ್ ಉದ್ದದ ಸುರಂಗದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯವನ್ನು ನೀರಿನ ಮಟ್ಟ ಏರಿಕೆಯಿಂದಾಗಿ ಸ್ಥಗಿತಗೊಳಿಸಬೇಕಾಗಿದೆ ಎಂದು ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.
(ಪಿಐಬಿ ಮಾಹಿತಿ)
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿರುವ ಹಿಮಪಾತದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಪಕ್ಷದ ಕಾರ್ಯಕರ್ತರು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಿಗೆ ನೆರವಾಗಬೇಕು ಎಂದು ಕರೆ ನೀಡಿದ್ದಾರೆ.
ಐವರು ಸ್ಥಳೀಯರು ಸೇರಿದಂತೆ 180 ಕುರಿಗಳು ಮತ್ತು ಮೇಕೆಗಳೊಂದಿಗೆ ಕುರಿಗಾಹಿಗಳು ಪ್ರವಾಹದಲ್ಲಿ ಮುಳುಗಿದ್ದಾರೆ. ಪ್ರವಾಹದಲ್ಲಿ ಸುಮಾರು 125 ಜನರು ಕಾಣೆಯಾಗಿದ್ದಾರೆ ಎಂದು ನಾವು ಊಹಿಸುತ್ತಿದ್ದೇವೆ. ಈ ಸಂಖ್ಯೆಯು ಹೆಚ್ಚಾಗಬಹುದು. ವಿಕೋಪದ ಹಿಂದಿನ ಕಾರಣವನ್ನು ತಜ್ಞರಷ್ಟೇ ಹೇಳಬಹುದಾಗಿದೆ. ಆದರೆ ನಮ್ಮ ಸರ್ಕಾರ ಇದೀಗ ಜನರ ಜೀವ ಉಳಿಸುವತ್ತ ಗಮನ ಹರಿಸಿದೆ: ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್