‘ರಾಹುಲ್ ಅಪಹಾಸ್ಯಕ್ಕೆ ಗುರಿಯಾಗಿದ್ದರು. ನಾನು ಮಾಡಿದ ತಪ್ಪಿಗೆ ಅವರನ್ನು ಕೆಟ್ಟದಾಗಿ ಬಿಂಬಿಸಲಾಯಿತು. ಈ ಘಟನೆಯಿಂದ ವಿಚಲಿತಳಾದ ನಾನು ಅವರ ಬಳಿ ತೆರಳಿ ಕ್ಷಮೆ ಕೋರಿದೆ. ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದೆ. ಆದರೆ, ರಾಜೀನಾಮೆ ಸ್ವೀಕರಿಸದ ರಾಹುಲ್, ಮಂದಿನ ಬಾರಿ ಎಚ್ಚರಿಕೆ ವಹಿಸಿ, ಜಾಗರೂಕರಾಗಿರಿ ಎಂದಷ್ಟೇ ಹೇಳಿ ರಾಜೀನಾಮೆ ಪಡೆಯಲು ನಿರಾಕರಿಸಿದರು. ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು’ ಎಂದು ಎರಡು ವರ್ಷಗಳ ನಂತರ ರಮ್ಯಾ ವಿವರಣೆ ನೀಡಿದ್ದಾರೆ.