<p class="title"><strong>ಶಿಮ್ಲಾ </strong>(ಪಿಟಿಐ): ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂಕುಸಿತ ಪ್ರಮಾಣ ಏಳು ಪಟ್ಟು ಹೆಚ್ಚಾಗಿದೆ. 2020ರಲ್ಲಿ 16 ಬಾರಿ ಭೂಕುಸಿತ ಸಂಭವಿಸಿದರೆ, 2022ರಲ್ಲಿ 117 ಬಾರಿ ಭೂಮಿ ಕುಸಿದಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.</p>.<p>2022ರಲ್ಲಿ ಸಂಭವಿಸಿದ ಒಟ್ಟು ಭೂಕುಸಿತಗಳ ಪೈಕಿ ಕುಲ್ಲುವಿನಲ್ಲಿ 21 ಬಾರಿ ಭೂಮಿ ಕುಸಿದಿದೆ. ಮಂಡಿಯಲ್ಲಿ 20 ಬಾರಿ, ಲಹೌಲ್ ಮತ್ತು ಸ್ಪಿಟಿಯಲ್ಲಿ ತಲಾ 18 ಹಾಗೂ ಶಿಮ್ಲಾದಲ್ಲಿ 15 ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ.</p>.<p>‘ರಾಜ್ಯದಲ್ಲಿ 17,120 ಭೂಕುಸಿತ ಪೀಡಿತ ಸ್ಥಳಗಳಿವೆ. ಅತಿ ಹೆಚ್ಚು ಮಳೆ ಮತ್ತು ಬೆಟ್ಟದ ಇಳಿಜಾರು ಅಥವಾ ಬಂಡೆಗಳ ಸವೆಯುವಿಕೆಯು ಭೂಕುಸಿತ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>.<p>‘ರಸ್ತೆ ಅಗಲೀಕರಣಕ್ಕಾಗಿ ಬೆಟ್ಟದ ಇಳಿಜಾರುಗಳನ್ನು ಕತ್ತರಿಸುವುದು ಹಾಗೂ ಸುರಂಗಗಳು, ಜಲ ಯೋಜನೆಗಳು ಮತ್ತು ಗಣಿಗಾರಿಕೆಗಾಗಿ ಸ್ಫೋಟಿಸುವುದೂ ಭೂಕುಸಿತ ಹೆಚ್ಚಳಕ್ಕೆ ಕಾರಣ’ ಎಂದು ಭೂವೈಜ್ಞಾನಿಕ ತಜ್ಞ ಪ್ರೊಫೆಸರ್ ವೀರೇಂದ್ರ ಸಿಂಗ್ ಧಾರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಶಿಮ್ಲಾ </strong>(ಪಿಟಿಐ): ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂಕುಸಿತ ಪ್ರಮಾಣ ಏಳು ಪಟ್ಟು ಹೆಚ್ಚಾಗಿದೆ. 2020ರಲ್ಲಿ 16 ಬಾರಿ ಭೂಕುಸಿತ ಸಂಭವಿಸಿದರೆ, 2022ರಲ್ಲಿ 117 ಬಾರಿ ಭೂಮಿ ಕುಸಿದಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.</p>.<p>2022ರಲ್ಲಿ ಸಂಭವಿಸಿದ ಒಟ್ಟು ಭೂಕುಸಿತಗಳ ಪೈಕಿ ಕುಲ್ಲುವಿನಲ್ಲಿ 21 ಬಾರಿ ಭೂಮಿ ಕುಸಿದಿದೆ. ಮಂಡಿಯಲ್ಲಿ 20 ಬಾರಿ, ಲಹೌಲ್ ಮತ್ತು ಸ್ಪಿಟಿಯಲ್ಲಿ ತಲಾ 18 ಹಾಗೂ ಶಿಮ್ಲಾದಲ್ಲಿ 15 ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ.</p>.<p>‘ರಾಜ್ಯದಲ್ಲಿ 17,120 ಭೂಕುಸಿತ ಪೀಡಿತ ಸ್ಥಳಗಳಿವೆ. ಅತಿ ಹೆಚ್ಚು ಮಳೆ ಮತ್ತು ಬೆಟ್ಟದ ಇಳಿಜಾರು ಅಥವಾ ಬಂಡೆಗಳ ಸವೆಯುವಿಕೆಯು ಭೂಕುಸಿತ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>.<p>‘ರಸ್ತೆ ಅಗಲೀಕರಣಕ್ಕಾಗಿ ಬೆಟ್ಟದ ಇಳಿಜಾರುಗಳನ್ನು ಕತ್ತರಿಸುವುದು ಹಾಗೂ ಸುರಂಗಗಳು, ಜಲ ಯೋಜನೆಗಳು ಮತ್ತು ಗಣಿಗಾರಿಕೆಗಾಗಿ ಸ್ಫೋಟಿಸುವುದೂ ಭೂಕುಸಿತ ಹೆಚ್ಚಳಕ್ಕೆ ಕಾರಣ’ ಎಂದು ಭೂವೈಜ್ಞಾನಿಕ ತಜ್ಞ ಪ್ರೊಫೆಸರ್ ವೀರೇಂದ್ರ ಸಿಂಗ್ ಧಾರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>