‘ಬ್ಲಾಕ್, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಚುನಾವಣೆ ನಡೆಸುವ ಅಗತ್ಯವಿದೆ. ಕನಿಷ್ಠ ಚುನಾವಣೆ ಸಂದರ್ಭದಲ್ಲಾದರೂ ಕಾಂಗ್ರೆಸ್ನ ಎಲ್ಲಾ ಹಂತದ ನಾಯಕರೂ ತಮ್ಮ ಪಂಚತಾರಾ ಸಂಸ್ಕೃತಿಯನ್ನು ಕೈಬಿಟ್ಟು ಕ್ಷೇತ್ರದಲ್ಲಿ ಉಳಿಯಬೇಕು. ಜನರು ಮತ್ತು ಕಾಂಗ್ರೆಸ್ ನಾಯಕರ ನಡುವೆ ದೊಡ್ಡಮಟ್ಟದಲ್ಲಿಯೇ ಸಂಪರ್ಕ ಕಡಿತಗೊಂಡಿದೆ. ಪಕ್ಷವು ಚುನಾವಣೆಯ ಸಮಯದಲ್ಲಿ ಮಾತ್ರವಲ್ಲ ಉಳಿದ ಸಮಯದಲ್ಲೂ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳಬೇಕು’ ಎಂದು ಅವರು ಸಂದರ್ಶನದಲ್ಲಿ ಅಭಿಪ್ರಾಯಟ್ಟಿದ್ದಾರೆ.