ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪಂಚತಾರಾ ಸಂಸ್ಕೃತಿ ತ್ಯಜಿಸಬೇಕು: ಗುಲಾಂ ನಬಿ ಆಜಾದ್

Last Updated 22 ನವೆಂಬರ್ 2020, 18:24 IST
ಅಕ್ಷರ ಗಾತ್ರ

ನವದೆಹಲಿ: ‘ಜನರು ಮತ್ತು ಕಾಂಗ್ರೆಸ್ ನಾಯಕರ ನಡುವೆ ದೊಡ್ಡಮಟ್ಟದಲ್ಲಿ ಸಂಪರ್ಕ ಕಡಿತಗೊಂಡಿದ್ದು, ಕಾಂಗ್ರೆಸ್ ಮುಖಂಡರು ‘ಪಂಚತಾರಾ ಸಂಸ್ಕೃತಿ’ಯನ್ನು ತ್ಯಜಿಸಬೇಕು’ ಎಂದು ಭಾನುವಾರ ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 70 ಸ್ಥಾನಗಳಲ್ಲಿ 19 ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಗೆದ್ದಿದ್ದು, ಪಕ್ಷದ ಸೋಲಿನ ನಂತರ ಆಜಾದ್ ಅವರು ಈ ಹೇಳಿಕೆ ನೀಡಿದ್ದಾರೆ.

‘ಬ್ಲಾಕ್, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಚುನಾವಣೆ ನಡೆಸುವ ಅಗತ್ಯವಿದೆ. ಕನಿಷ್ಠ ಚುನಾವಣೆ ಸಂದರ್ಭದಲ್ಲಾದರೂ ಕಾಂಗ್ರೆಸ್‌ನ ಎಲ್ಲಾ ಹಂತದ ನಾಯಕರೂ ತಮ್ಮ ಪಂಚತಾರಾ ಸಂಸ್ಕೃತಿಯನ್ನು ಕೈಬಿಟ್ಟು ಕ್ಷೇತ್ರದಲ್ಲಿ ಉಳಿಯಬೇಕು. ಜನರು ಮತ್ತು ಕಾಂಗ್ರೆಸ್ ನಾಯಕರ ನಡುವೆ ದೊಡ್ಡಮಟ್ಟದಲ್ಲಿಯೇ ಸಂಪರ್ಕ ಕಡಿತಗೊಂಡಿದೆ. ಪಕ್ಷವು ಚುನಾವಣೆಯ ಸಮಯದಲ್ಲಿ ಮಾತ್ರವಲ್ಲ ಉಳಿದ ಸಮಯದಲ್ಲೂ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳಬೇಕು’ ಎಂದು ಅವರು ಸಂದರ್ಶನದಲ್ಲಿ ಅಭಿಪ್ರಾಯಟ್ಟಿದ್ದಾರೆ.

‘ಪ್ರತಿನಾಯಕನಿಗೆ ಪ್ರತಿವಿಧಾನಸಭಾ ಕ್ಷೇತ್ರದ ಬಗ್ಗೆ ಜ್ಞಾನವಿರಬೇಕು. ಕೇವಲ ದೆಹಲಿಯಿಂದ ಹೋಗಿ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದು ಎರಡು ಮೂರು ದಿನಗಳ ನಂತರ ದೆಹಲಿಗೆ ಮರಳುವುದು ಹಣ ವ್ಯರ್ಥವಲ್ಲದೆ ಮತ್ತೇನಲ್ಲ. ನಾವು ಸುಧಾರಣಾವಾದಿಗಳು ಬಂಡುಕೋರರಲ್ಲ’ಎಂದೂ ಆಜಾದ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT