<p><strong>ನವದೆಹಲಿ:</strong> ‘ಕೋವಿಡ್ ಲಸಿಕೆ ವಿಷಯದಲ್ಲಿ ಜನರು ಸ್ವಾವಲಂಬಿ ಆಗಬೇಕು. ಕೇಂದ್ರ ಸರ್ಕಾರ, ಟ್ವಿಟರ್ನ ಬ್ಲೂಟಿಕ್ ಬ್ಯಾಡ್ಜ್ಗಾಗಿ ಹೋರಾಟ ನಡೆಸಿದೆ’ ಎಂದು ಕಾಂಗ್ರೆಸ್ ಮುಖಂಡರ ರಾಹುಲ್ ಗಾಂಧಿ ಟೀಕಿಸಿದ್ದಾರೆ.</p>.<p>ಟ್ವಿಟರ್ ಆಡಳಿತವು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಮೋಹನ್ ಭಾಗವತ್ ಸೇರಿ ಆರ್ಎಸ್ಎಸ್ ಉನ್ನತ ನಾಯಕರ ಖಾತೆಯಿಂದ ಬ್ಲೂಟಿಕ್ ಗುರುತು ತೆಗೆದ ಗೊಂದಲ ಕುರಿತು ಹೀಗೆ ಪ್ರತಿಕ್ರಿಯಿಸಿದ್ದಾರೆ.</p>.<p>ನಿಯಮಗಳ ಅನುಸಾರ ಆರು ತಿಂಗಳು ಯಾವುದೇ ಖಾತೆ ನಿಷ್ಕ್ರಿಯವಾಗಿದ್ದರೆ, ಸ್ವಯಂಚಾಲಿತವಾಗಿ ಬ್ಲೂ ಟಿಕ್ ಗುರುತನ್ನು ತೆಗೆಯಲಾಗುತ್ತದೆ ಎಂದು ಟ್ವಿಟರ್ ಪ್ರತಿಕ್ರಿಯಿಸಿದೆ.</p>.<p>ಮೋದಿ ಸರ್ಕಾರ ಈಗ ಬ್ಲೂ ಟಿಕ್ ಗುರುತಿಗಾಗಿ ಹೋರಾಟ ನಡೆಸಿದೆ. ನಿಮಗೆ ಕೋವಿಡ್ ಲಸಿಕೆ ಬೇಕಿದ್ದಲ್ಲಿ ಸ್ವಾವಲಂಬಿಯಾಗಿ ಎಂದು ಟ್ವೀಟ್ ಮಾಡಿದ್ದಾರೆ.</p>.<p><strong>ಬಿಜೆಪಿ ತಿರುಗೇಟು:</strong> ಕೋವಿಡ್ ಲಸಿಕೆ ಕುರಿತಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣದಿಂದ ಹೊರಬಂದು ವಾಸ್ತವ ಸ್ಥಿತಿ ಅರಿಯಬೇಕು ಎಂದು ಬಿಜೆಪಿ ತಿರುಗೇಟು ನೀಡಿದೆ.</p>.<p>ಲಸಿಕೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಲಸಿಕೆ ಅಕ್ರಮ ಕುರಿತಂತೆ ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜ್ಯ ಸರ್ಕಾರಗಳ ಜೊತೆಗೆ ಚರ್ಚಿಸಲಿ ಎಂದು ಸಲಹೆ ಮಾಡಿದೆ.</p>.<p>ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಅವರು, ಟ್ವಿಟರ್ನಲ್ಲಿ ರಾಜಕಾರಣ ಮಾಡುವುದು ರಾಹುಲ್ ಗಾಂಧಿ ಅವರಿಗೆ ಮಹತ್ವದ ವಿಷಯ. ಲಸಿಕೆ ವಿಷಯದಲ್ಲಿ ಮೋದಿ ಸರ್ಕಾರ ಗಮನಾರ್ಹ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/technology/social-media/tirangatick-and-tirangaverified-has-tags-are-trending-on-twittet-against-blue-tick-836505.html" target="_blank">ಬ್ಲೂ ಟಿಕ್ ವಿರುದ್ಧ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಯಿತು‘ತಿರಂಗಾ‘ ಟಿಕ್...</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಕೋವಿಡ್ ಲಸಿಕೆ ವಿಷಯದಲ್ಲಿ ಜನರು ಸ್ವಾವಲಂಬಿ ಆಗಬೇಕು. ಕೇಂದ್ರ ಸರ್ಕಾರ, ಟ್ವಿಟರ್ನ ಬ್ಲೂಟಿಕ್ ಬ್ಯಾಡ್ಜ್ಗಾಗಿ ಹೋರಾಟ ನಡೆಸಿದೆ’ ಎಂದು ಕಾಂಗ್ರೆಸ್ ಮುಖಂಡರ ರಾಹುಲ್ ಗಾಂಧಿ ಟೀಕಿಸಿದ್ದಾರೆ.</p>.<p>ಟ್ವಿಟರ್ ಆಡಳಿತವು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಮೋಹನ್ ಭಾಗವತ್ ಸೇರಿ ಆರ್ಎಸ್ಎಸ್ ಉನ್ನತ ನಾಯಕರ ಖಾತೆಯಿಂದ ಬ್ಲೂಟಿಕ್ ಗುರುತು ತೆಗೆದ ಗೊಂದಲ ಕುರಿತು ಹೀಗೆ ಪ್ರತಿಕ್ರಿಯಿಸಿದ್ದಾರೆ.</p>.<p>ನಿಯಮಗಳ ಅನುಸಾರ ಆರು ತಿಂಗಳು ಯಾವುದೇ ಖಾತೆ ನಿಷ್ಕ್ರಿಯವಾಗಿದ್ದರೆ, ಸ್ವಯಂಚಾಲಿತವಾಗಿ ಬ್ಲೂ ಟಿಕ್ ಗುರುತನ್ನು ತೆಗೆಯಲಾಗುತ್ತದೆ ಎಂದು ಟ್ವಿಟರ್ ಪ್ರತಿಕ್ರಿಯಿಸಿದೆ.</p>.<p>ಮೋದಿ ಸರ್ಕಾರ ಈಗ ಬ್ಲೂ ಟಿಕ್ ಗುರುತಿಗಾಗಿ ಹೋರಾಟ ನಡೆಸಿದೆ. ನಿಮಗೆ ಕೋವಿಡ್ ಲಸಿಕೆ ಬೇಕಿದ್ದಲ್ಲಿ ಸ್ವಾವಲಂಬಿಯಾಗಿ ಎಂದು ಟ್ವೀಟ್ ಮಾಡಿದ್ದಾರೆ.</p>.<p><strong>ಬಿಜೆಪಿ ತಿರುಗೇಟು:</strong> ಕೋವಿಡ್ ಲಸಿಕೆ ಕುರಿತಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣದಿಂದ ಹೊರಬಂದು ವಾಸ್ತವ ಸ್ಥಿತಿ ಅರಿಯಬೇಕು ಎಂದು ಬಿಜೆಪಿ ತಿರುಗೇಟು ನೀಡಿದೆ.</p>.<p>ಲಸಿಕೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಲಸಿಕೆ ಅಕ್ರಮ ಕುರಿತಂತೆ ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜ್ಯ ಸರ್ಕಾರಗಳ ಜೊತೆಗೆ ಚರ್ಚಿಸಲಿ ಎಂದು ಸಲಹೆ ಮಾಡಿದೆ.</p>.<p>ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಅವರು, ಟ್ವಿಟರ್ನಲ್ಲಿ ರಾಜಕಾರಣ ಮಾಡುವುದು ರಾಹುಲ್ ಗಾಂಧಿ ಅವರಿಗೆ ಮಹತ್ವದ ವಿಷಯ. ಲಸಿಕೆ ವಿಷಯದಲ್ಲಿ ಮೋದಿ ಸರ್ಕಾರ ಗಮನಾರ್ಹ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/technology/social-media/tirangatick-and-tirangaverified-has-tags-are-trending-on-twittet-against-blue-tick-836505.html" target="_blank">ಬ್ಲೂ ಟಿಕ್ ವಿರುದ್ಧ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಯಿತು‘ತಿರಂಗಾ‘ ಟಿಕ್...</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>