ಪ್ರಾಂಶುಪಾಲರು ನ.23ರಂದು 9 ವಿದ್ಯಾರ್ಥಿನಿಯರನ್ನು ಬೃಂದಾವನಕ್ಕೆ ಪ್ರವಾಸಕ್ಕೆ ಕರೆದೊಯ್ದು, ಉಳಿದುಕೊಳ್ಳಲು ಹೋಟೆಲ್ನಲ್ಲಿ ಎರಡು ಕೊಠಡಿಗಳನ್ನು ನಿಗದಿಪಡಿಸಿದ್ದರು. ಒಂದು ಕೊಠಡಿಯಲ್ಲಿ ಎಂಟು ವಿದ್ಯಾರ್ಥಿನಿಯರು ಉಳಿದುಕೊಂಡಿದ್ದರು. ಮತ್ತೊಂದು ಕೋಣೆಯಲ್ಲಿ 11ನೇ ತರಗತಿಯ ವಿದ್ಯಾರ್ಥಿನಿಯೊಂದಿಗೆ ಪ್ರಾಂಶುಪಾಲರು ಉಳಿದುಕೊಂಡಿದ್ದರು. ಇಲ್ಲಿ ವಿದ್ಯಾರ್ಥಿನಿ ಸೇವಿಸುವ ಆಹಾರದಲ್ಲಿ ಅಮಲಿನ ಪದಾರ್ಥ ಬೆರೆಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.