ದೆಹಲಿಯ ಎಎಪಿ ಶಾಸಕ ಮತ್ತು ಪಕ್ಷದ ಗುಜರಾತ್ ಉಸ್ತುವಾರಿ ಗುಲಾಬ್ ಸಿಂಗ್ ರಜಪೂತ್ ಮಾತನಾಡಿ, 'ಇಲ್ಲಿನ ಬಿಜೆಪಿ ಮತ್ತು ಕಾಂಗ್ರೆಸ್ನ ನಾಯಕರು ಎಎಪಿ ಸೇರಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯ ಸಂಕೇತವಾಗಿದೆ. ಮುಂಬರುವ ವರ್ಷ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ದೊಡ್ಡ ದೊಡ್ಡ ನಾಯಕರು ಎಎಪಿಗೆ ಸೇರ್ಪಡೆಯಾಗಲಿದ್ದಾರೆ' ಎಂದರು.