<p><strong>ಅಮ್ರೇಲಿ:</strong> ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ 5 ವರ್ಷದ ಗಂಡು ಸಿಂಹ ಮತ್ತು 9 ವರ್ಷದ ಸಿಂಹಿಣಿ ತೆರೆದ ಬಾವಿಗೆ ಬಿದ್ದು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.</p>.<p>ಖಂಭ ತಾಲ್ಲೂಕಿನ ಕೊಟ್ಡಾ ಗ್ರಾಮದ ರೈತರೊಬ್ಬರಿಗೆ ಸೇರಿದ ಬಾವಿಗೆ ಸಿಂಹಗಳೆರಡು ಆಕಸ್ಮಿಕವಾಗಿ ಬಿದ್ದು ಮುಳುಗಿ ಮೃತಪಟ್ಟಿವೆ ಎಂದು ಗಿರ್ ಅರಣ್ಯ ಸಂರಕ್ಷಣಾಧಿಕಾರಿ ರಾಜ್ದೀಪ್ಸಿಂಗ್ ಜಾಲಾ ಹೇಳಿದರು.</p>.<p>ಘಟನೆ ನಡೆದಿರುವುದು ತಿಳಿದುಬಂದ ಕೂಡಲೇ ಬಾವಿಯ ಮಾಲೀಕ ಮಾಹಿತಿ ನೀಡಿದರು. ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತು. ಆದರೆ ಆಗಲೇ ಸಿಂಹಗಳೆರಡು ಮುಳುಗಿದ್ದವು. ಅವುಗಳ ಮೃತದೇಹವನ್ನು ಬಾವಿಯಿಂದ ಹೊರಗೆ ತೆಗೆದು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಜ್ದೀಪ್ಸಿಂಗ್ ಜಾಲಾ ತಿಳಿಸಿದರು.</p>.<p>2007-08ರಿಂದ ಗಿರ್ ಅರಣ್ಯದ ಪೂರ್ವ ಭಾಗಕ್ಕೆ ಸೇರಿದ ಅಮ್ರೇಲಿ ಮತ್ತು ಸೋಮನಾಥ ಜಿಲ್ಲೆಗಳಲ್ಲಿ ಸುಮಾರು 11,748 ಬಾವಿಗಳಿಗೆ ವನ್ಯಜೀವಿಗಳು ಬೀಳದಂತೆ ಅಡ್ಡಗೋಡೆಗಳನ್ನು ನಿರ್ಮಿಸಲಾಗಿದೆ. ಆದರೆ ಹೊಸದಾಗಿ ಬಾವಿಗಳನ್ನು ನಿರ್ಮಿಸುವ ಪ್ರಕ್ರಿಯೆಗಳು ನಿರಂತರವಾಗಿದೆ ಎಂದು ರಾಜ್ದೀಪ್ಸಿಂಗ್ ಜಾಲಾ ಹೇಳಿದರು.</p>.<p>ಡಿಸೆಂಬರ್ 2021ರ ವರೆಗೆ ಹಿಂದಿನ ಎರಡು ವರ್ಷಗಳಲ್ಲಿ ಒಟ್ಟು 283 ಸಿಂಹಗಳು ಮೃತಪಟ್ಟಿರುವುದಾಗಿ ಕಳೆದ ವರ್ಷ ಮಾರ್ಚ್ನಲ್ಲಿ ಅರಣ್ಯ ಸಚಿವ ಕಿರಿಟ್ಸಿಂಗ್ ರಾಣಾ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದರು. ಈ ಪೈಕಿ ಬಾವಿಗೆ ಬಿದ್ದು ಅಥವಾ ರೈಲು, ವಾಹನಗಳ ಅಡಿಗೆ ಸಿಕ್ಕಿ 21 ಸಿಂಹಗಳು ಮೃತಪಟ್ಟಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮ್ರೇಲಿ:</strong> ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ 5 ವರ್ಷದ ಗಂಡು ಸಿಂಹ ಮತ್ತು 9 ವರ್ಷದ ಸಿಂಹಿಣಿ ತೆರೆದ ಬಾವಿಗೆ ಬಿದ್ದು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.</p>.<p>ಖಂಭ ತಾಲ್ಲೂಕಿನ ಕೊಟ್ಡಾ ಗ್ರಾಮದ ರೈತರೊಬ್ಬರಿಗೆ ಸೇರಿದ ಬಾವಿಗೆ ಸಿಂಹಗಳೆರಡು ಆಕಸ್ಮಿಕವಾಗಿ ಬಿದ್ದು ಮುಳುಗಿ ಮೃತಪಟ್ಟಿವೆ ಎಂದು ಗಿರ್ ಅರಣ್ಯ ಸಂರಕ್ಷಣಾಧಿಕಾರಿ ರಾಜ್ದೀಪ್ಸಿಂಗ್ ಜಾಲಾ ಹೇಳಿದರು.</p>.<p>ಘಟನೆ ನಡೆದಿರುವುದು ತಿಳಿದುಬಂದ ಕೂಡಲೇ ಬಾವಿಯ ಮಾಲೀಕ ಮಾಹಿತಿ ನೀಡಿದರು. ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತು. ಆದರೆ ಆಗಲೇ ಸಿಂಹಗಳೆರಡು ಮುಳುಗಿದ್ದವು. ಅವುಗಳ ಮೃತದೇಹವನ್ನು ಬಾವಿಯಿಂದ ಹೊರಗೆ ತೆಗೆದು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಜ್ದೀಪ್ಸಿಂಗ್ ಜಾಲಾ ತಿಳಿಸಿದರು.</p>.<p>2007-08ರಿಂದ ಗಿರ್ ಅರಣ್ಯದ ಪೂರ್ವ ಭಾಗಕ್ಕೆ ಸೇರಿದ ಅಮ್ರೇಲಿ ಮತ್ತು ಸೋಮನಾಥ ಜಿಲ್ಲೆಗಳಲ್ಲಿ ಸುಮಾರು 11,748 ಬಾವಿಗಳಿಗೆ ವನ್ಯಜೀವಿಗಳು ಬೀಳದಂತೆ ಅಡ್ಡಗೋಡೆಗಳನ್ನು ನಿರ್ಮಿಸಲಾಗಿದೆ. ಆದರೆ ಹೊಸದಾಗಿ ಬಾವಿಗಳನ್ನು ನಿರ್ಮಿಸುವ ಪ್ರಕ್ರಿಯೆಗಳು ನಿರಂತರವಾಗಿದೆ ಎಂದು ರಾಜ್ದೀಪ್ಸಿಂಗ್ ಜಾಲಾ ಹೇಳಿದರು.</p>.<p>ಡಿಸೆಂಬರ್ 2021ರ ವರೆಗೆ ಹಿಂದಿನ ಎರಡು ವರ್ಷಗಳಲ್ಲಿ ಒಟ್ಟು 283 ಸಿಂಹಗಳು ಮೃತಪಟ್ಟಿರುವುದಾಗಿ ಕಳೆದ ವರ್ಷ ಮಾರ್ಚ್ನಲ್ಲಿ ಅರಣ್ಯ ಸಚಿವ ಕಿರಿಟ್ಸಿಂಗ್ ರಾಣಾ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದರು. ಈ ಪೈಕಿ ಬಾವಿಗೆ ಬಿದ್ದು ಅಥವಾ ರೈಲು, ವಾಹನಗಳ ಅಡಿಗೆ ಸಿಕ್ಕಿ 21 ಸಿಂಹಗಳು ಮೃತಪಟ್ಟಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>