ವಾರಾಣಸಿ: ಜ್ಞಾನವಾಪಿ- ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದ ಕುರಿತು ಗುರುವಾರ ಮುಸ್ಲಿಂ ಪರ ವಾದವನ್ನು ಆಲಿಸಿದ ಇಲ್ಲಿನ ಜಿಲ್ಲಾ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 30ರಂದು ನಿಗದಿಪಡಿಸಿದೆ.
‘ಪ್ರಕರಣದ ನಿರ್ವಹಣೆಯ ಕುರಿತು ಮುಸ್ಲಿಂ ಕಡೆಯ ವಾದಗಳು ಗುರುವಾರ ಅಪೂರ್ಣವಾಗಿವೆ. ಹಾಗಾಗಿ, ಮೇ 30ರಂದು ನಡೆಯುವ ವಿಚಾರಣೆಯಲ್ಲಿ ವಾದ ಮುಂದುವರಿಯಲಿದೆ’ ಎಂದು ಜಿಲ್ಲಾ ಸರ್ಕಾರಿ ವಕೀಲ ರಾಣಾ ಸಂಜೀವ್ ಸಿಂಗ್ ಮಾಹಿತಿ ನೀಡಿದ್ದಾರೆ.
ಜ್ಞಾನವಾಪಿ- ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದ ನಿರ್ವಹಣೆಯ ಕುರಿತು ವಿಚಾರಣೆಯನ್ನು ಮೇ 26ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಈ ಹಿಂದೆ ನ್ಯಾಯಾಲಯವು ತಿಳಿಸಿತ್ತು.