ಜಬಲ್ಪುರ, ಮಧ್ಯಪ್ರದೇಶ (ಪಿಟಿಐ): ‘ಪೌರ ಕಾರ್ಮಿಕರು ಅಥವಾಕೆಳ ವರ್ಗಕ್ಕೆ ಸೇರಿದ ಕುಟುಂಬದವರನ್ನು ನಿಮ್ಮ ಮನೆಗಳಿಗೆ ಬರಮಾಡಿಕೊಂಡು ವಾರದಲ್ಲಿ ಕನಿಷ್ಠ ಒಮ್ಮೆಯಾದರೂ ಅವರೊಂದಿಗೆ ಕುಳಿತು ಊಟ ಮಾಡಿ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರು ಸಂಘದ ಸ್ವಯಂಸೇವಕರ ಕುಟುಂಬದವರಿಗೆ ತಿಳಿಸಿದ್ದಾರೆ.