<p><strong>ನವದೆಹಲಿ: </strong>ದೇಶದಲ್ಲಿ ಕಳೆದ 120 ವರ್ಷಗಳಲ್ಲಿಯೇ ಫೆಬ್ರುವರಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.</p>.<p>ಫೆಬ್ರುವರಿ ತಿಂಗಳಲ್ಲಿ ಸರಾಸರಿ ಕನಿಷ್ಠ ತಾಪಮಾನ 16.31 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ವರ್ಷ ದೇಶದಲ್ಲಿ ದಾಖಲಾದ ಸರಾಸರಿ ತಾಪಮಾನ 29.54 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು 1901ರ ನಂತರ ದಾಖಲಾದ ಗರಿಷ್ಠ ತಾಪಮಾನವಾಗಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>‘ಮಾರ್ಚ್ನಲ್ಲಿ, ದೇಶದ ಬಹುತೇಕ ಭಾಗಗಳಲ್ಲಿ ತಿಂಗಳ ಗರಿಷ್ಠ ತಾಪಮಾನವು ಸರಾಸರಿಗಿಂತಲೂ ಅಧಿಕವಿರುವ ಸಾಧ್ಯತೆ ಇದೆ. ತಿಂಗಳ ಕನಿಷ್ಠ ತಾಪಮಾನ ಕೂಡ ವಾಡಿಕೆ ಉಷ್ಣಾಂಶಕ್ಕಿಂತ ಹೆಚ್ಚೇ ಇರಲಿದೆ’ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಎಸ್.ಸಿ.ಭಾನ್ ತಿಳಿಸಿದ್ದಾರೆ.</p>.<p>ಮಾರ್ಚ್ನಲ್ಲಿ ಕಂಡುಬರಬಹುದಾದ ತಾಪಮಾನದಲ್ಲಿನ ಹೆಚ್ಚಳವು ಗೋಧಿ ಕೊಯಿಲಿನ ಮೇಲೆ ಪರಿಣಾಮ ಬೀರಲಿದೆ ಎಂದು ಕೃಷಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ಅಧಿಕ ತಾಪಮಾನದಿಂದಾಗಿ ಗೋಧಿ ಪೈರಿನ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೈತರಿಗೆ ಸಲಹೆ–ಸೂಚನೆಗಳನ್ನು ನೀಡಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.</p>.<p>ಸೂಚನೆ: ದೇಶದ ಹಲವೆಡೆ ತಾಪಮಾನದಲ್ಲಿ ಅಸಾಧಾರಣ ಹೆಚ್ಚಳ ಕಂಡುಬರುತ್ತಿದೆ. ಬಿಸಿಲ ಝಳದಿಂದಾಗಿ ಕಾಣಿಸಿಕೊಳ್ಳುವ ಕಾಯಿಲೆಗಳ ಮೇಲೆ ಕಣ್ಗಾವಲು ಇರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚಿಸಿದ್ದಾರೆ.</p>.<p>ಬಿಸಿಲ ಝಳದಿಂದಾಗಿ ಕಂಡುಬರುವ ಕಾಯಿಲೆಗಳು ಹಾಗೂ ಸಂಭವಿಸುವ ಸಾವುಗಳ ಕುರಿತ ಮಾಹಿತಿಯನ್ನು ಸಂಬಂಧಪಟ್ಟ ಪೋರ್ಟಲ್ನಲ್ಲಿ ಅಳವಡಿಸುವಂತೆ ಅವರು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.</p>.<p>‘ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಕೂಲಿಂಗ್ ಸಾಧನಗಳನ್ನು ಅಳವಡಿಸಬೇಕು. ಒಆರ್ಎಸ್, ಐಸ್ಪ್ಯಾಕ್ಗಳು ಹಾಗೂ ಅಗತ್ಯ ಔಷಧಿಗಳ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು’ ಎಂದೂ ಅವರು ಸೂಚಿಸಿದ್ದಾರೆ.</p>.<p>ಬಾಕ್ಸ್,,,,,,,,</p>.<p>ಬಿಸಿಗಾಳಿ: ಆರೋಗ್ಯ ಸಚಿವಾಲಯದ ಸಲಹೆಗಳು</p>.<p>ನವದೆಹಲಿ: ದೇಶದಲ್ಲಿ ಬರುವ ದಿನಗಳಲ್ಲಿ ಬಿಸಿ ಗಾಳಿ ಬೀಸುವುದು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸಚಿವಾಲಯವು ಸಲಹೆ ನೀಡಿದೆ.</p>.<p>ಈ ವರ್ಷ, ತಾಪಮಾನದಲ್ಲಿ ಕಂಡುಬರಬಹುದಾದ ಹೆಚ್ಚಳಕ್ಕೆ ಸಂಬಂಧಿಸಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ ಬೆನ್ನಲ್ಲೇ ಸಚಿವಾಲಯವು ಸಲಹೆಗಳ ಪಟ್ಟಿಯನ್ನು ಪ್ರಕಟಿಸಿದೆ.</p>.<p>ನಿತ್ಯದ ಹವಾಮಾನ ಕುರಿತ ಮಾಹಿತಿ ಹಾಗೂ ಸಲಹೆ–ಸೂಚನೆಗಳಿಗಾಗಿ ರೇಡಿಯೊ ಕೇಳಬೇಕು, ಟಿವಿ ವೀಕ್ಷಿಸಬೇಕು ಅಥವಾ ದಿನಪತ್ರಿಕೆಗಳನ್ನು ಗಮನಿಸಬೇಕು. ಇಲಾಖೆಯ ವೆಬ್ಸೈಟ್ಗೂ ಭೇಟಿ ನೀಡುವಂತೆ ತಿಳಿಸಿದೆ.</p>.<p>ಏನು ಮಾಡಬಾರದು?</p>.<p>* ಬಿಸಿಲ ಝಳ ಹೆಚ್ಚಾಗಿರುವ ದಿನದ ಅವಧಿಯಲ್ಲಿ ಅಧಿಕ ಪ್ರೊಟೀನ್ಯುಕ್ತ ಆಹಾರ ಸೇವನೆ</p>.<p>* ಮಧ್ಯಾಹ್ನ 12ರಿಂದ 3ರ ವರೆಗೆ ಮನೆಯಿಂದ ಹೊರಗೆ ಹೋಗುವುದು</p>.<p>* ಬರಿಗಾಲಿನಲ್ಲಿ ಹೊರಗೆ ಹೋಗಬಾರದು</p>.<p><br />ಏನು ಮಾಡಬೇಕು?</p>.<p>* ಬಾಯಾರಿಕೆ ಎನಿಸಿದ್ದರೂ ಹೆಚ್ಚು ಕುಡಿಯಬೇಕು</p>.<p>* ಒಆರ್ಎಸ್ ಬಳಕೆ</p>.<p>* ಹಣ್ಣಿನ ಜ್ಯೂಸ್ (ಸ್ವಲ್ಪ ಉಪ್ಪು ಬೆರೆಸಬೇಕು), ಮಜ್ಜಿಗೆ/ಲಸ್ಸಿ ಕುಡಿಯಬೇಕು</p>.<p>* ಸಾಕಷ್ಟು ಗಾಳಿಯಾಡುವ ಹಾಗೂ ತಂಪಾದ ಒಳಾಂಗಣಗಳಲ್ಲಿ ಇರಬೇಕು</p>.<p>* ತೆಳುವಾದ ಅರಳೆಯ ವಸ್ತ್ರಗಳನ್ನು ಧರಿಸಬೇಕು</p>.<p>* ಹೊರಗಡೆ ಹೋಗುವ ಸಂದರ್ಭಗಳಲ್ಲಿ ಕೊಡೆ, ಟೊಪ್ಪಿಗೆ, ಟವಲ್ ಅಥವಾ ತಲೆಗೆ ಹೊದ್ದುಕೊಳ್ಳುವ ಸಾಂಪ್ರದಾಯಿಕ ವಸ್ತ್ರಗಳನ್ನು ಬಳಸಿ</p>.<p><br />108/102ಕ್ಕೆ ಕರೆ ಮಾಡಿ</p>.<p>ಬಿಸಿಗಾಳಿಯಿಂದಾಗಿ ಆರೋಗ್ಯದಲ್ಲಿ ಕಂಡುಬರುವ ಏರುಪೇರುಗಳತ್ತ ಗಮನ ಕೊಡಬೇಕು. ತಲೆಸುತ್ತು, ವಾಂತಿ, ತಲೆನೋವು, ವಿಪರೀತ ಬಾಯಾರಿಕೆ, ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ, ತೀವ್ರ ಉಸಿರಾಟ ಹಾಗೂ ಹೃದಯ ಬಡಿತದಲ್ಲಿ ಹೆಚ್ಚಳ ಕಂಡು ಬಂದರೆ ಕೂಡಲೇ ವೈದ್ಯಕೀಯ ಸಲಹೆ ಪಡೆಯಬೇಕು.</p>.<p>ತುರ್ತು ಸಂದರ್ಭಗಳಲ್ಲಿ ಶುಲ್ಕರಹಿತ ದೂರವಾಣಿ ಸಂಖ್ಯೆ 108 ಅಥವಾ 102 ಸಂಪರ್ಕಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ದೇಶದಲ್ಲಿ ಕಳೆದ 120 ವರ್ಷಗಳಲ್ಲಿಯೇ ಫೆಬ್ರುವರಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.</p>.<p>ಫೆಬ್ರುವರಿ ತಿಂಗಳಲ್ಲಿ ಸರಾಸರಿ ಕನಿಷ್ಠ ತಾಪಮಾನ 16.31 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ವರ್ಷ ದೇಶದಲ್ಲಿ ದಾಖಲಾದ ಸರಾಸರಿ ತಾಪಮಾನ 29.54 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು 1901ರ ನಂತರ ದಾಖಲಾದ ಗರಿಷ್ಠ ತಾಪಮಾನವಾಗಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>‘ಮಾರ್ಚ್ನಲ್ಲಿ, ದೇಶದ ಬಹುತೇಕ ಭಾಗಗಳಲ್ಲಿ ತಿಂಗಳ ಗರಿಷ್ಠ ತಾಪಮಾನವು ಸರಾಸರಿಗಿಂತಲೂ ಅಧಿಕವಿರುವ ಸಾಧ್ಯತೆ ಇದೆ. ತಿಂಗಳ ಕನಿಷ್ಠ ತಾಪಮಾನ ಕೂಡ ವಾಡಿಕೆ ಉಷ್ಣಾಂಶಕ್ಕಿಂತ ಹೆಚ್ಚೇ ಇರಲಿದೆ’ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಎಸ್.ಸಿ.ಭಾನ್ ತಿಳಿಸಿದ್ದಾರೆ.</p>.<p>ಮಾರ್ಚ್ನಲ್ಲಿ ಕಂಡುಬರಬಹುದಾದ ತಾಪಮಾನದಲ್ಲಿನ ಹೆಚ್ಚಳವು ಗೋಧಿ ಕೊಯಿಲಿನ ಮೇಲೆ ಪರಿಣಾಮ ಬೀರಲಿದೆ ಎಂದು ಕೃಷಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ಅಧಿಕ ತಾಪಮಾನದಿಂದಾಗಿ ಗೋಧಿ ಪೈರಿನ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೈತರಿಗೆ ಸಲಹೆ–ಸೂಚನೆಗಳನ್ನು ನೀಡಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.</p>.<p>ಸೂಚನೆ: ದೇಶದ ಹಲವೆಡೆ ತಾಪಮಾನದಲ್ಲಿ ಅಸಾಧಾರಣ ಹೆಚ್ಚಳ ಕಂಡುಬರುತ್ತಿದೆ. ಬಿಸಿಲ ಝಳದಿಂದಾಗಿ ಕಾಣಿಸಿಕೊಳ್ಳುವ ಕಾಯಿಲೆಗಳ ಮೇಲೆ ಕಣ್ಗಾವಲು ಇರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚಿಸಿದ್ದಾರೆ.</p>.<p>ಬಿಸಿಲ ಝಳದಿಂದಾಗಿ ಕಂಡುಬರುವ ಕಾಯಿಲೆಗಳು ಹಾಗೂ ಸಂಭವಿಸುವ ಸಾವುಗಳ ಕುರಿತ ಮಾಹಿತಿಯನ್ನು ಸಂಬಂಧಪಟ್ಟ ಪೋರ್ಟಲ್ನಲ್ಲಿ ಅಳವಡಿಸುವಂತೆ ಅವರು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.</p>.<p>‘ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಕೂಲಿಂಗ್ ಸಾಧನಗಳನ್ನು ಅಳವಡಿಸಬೇಕು. ಒಆರ್ಎಸ್, ಐಸ್ಪ್ಯಾಕ್ಗಳು ಹಾಗೂ ಅಗತ್ಯ ಔಷಧಿಗಳ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು’ ಎಂದೂ ಅವರು ಸೂಚಿಸಿದ್ದಾರೆ.</p>.<p>ಬಾಕ್ಸ್,,,,,,,,</p>.<p>ಬಿಸಿಗಾಳಿ: ಆರೋಗ್ಯ ಸಚಿವಾಲಯದ ಸಲಹೆಗಳು</p>.<p>ನವದೆಹಲಿ: ದೇಶದಲ್ಲಿ ಬರುವ ದಿನಗಳಲ್ಲಿ ಬಿಸಿ ಗಾಳಿ ಬೀಸುವುದು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸಚಿವಾಲಯವು ಸಲಹೆ ನೀಡಿದೆ.</p>.<p>ಈ ವರ್ಷ, ತಾಪಮಾನದಲ್ಲಿ ಕಂಡುಬರಬಹುದಾದ ಹೆಚ್ಚಳಕ್ಕೆ ಸಂಬಂಧಿಸಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ ಬೆನ್ನಲ್ಲೇ ಸಚಿವಾಲಯವು ಸಲಹೆಗಳ ಪಟ್ಟಿಯನ್ನು ಪ್ರಕಟಿಸಿದೆ.</p>.<p>ನಿತ್ಯದ ಹವಾಮಾನ ಕುರಿತ ಮಾಹಿತಿ ಹಾಗೂ ಸಲಹೆ–ಸೂಚನೆಗಳಿಗಾಗಿ ರೇಡಿಯೊ ಕೇಳಬೇಕು, ಟಿವಿ ವೀಕ್ಷಿಸಬೇಕು ಅಥವಾ ದಿನಪತ್ರಿಕೆಗಳನ್ನು ಗಮನಿಸಬೇಕು. ಇಲಾಖೆಯ ವೆಬ್ಸೈಟ್ಗೂ ಭೇಟಿ ನೀಡುವಂತೆ ತಿಳಿಸಿದೆ.</p>.<p>ಏನು ಮಾಡಬಾರದು?</p>.<p>* ಬಿಸಿಲ ಝಳ ಹೆಚ್ಚಾಗಿರುವ ದಿನದ ಅವಧಿಯಲ್ಲಿ ಅಧಿಕ ಪ್ರೊಟೀನ್ಯುಕ್ತ ಆಹಾರ ಸೇವನೆ</p>.<p>* ಮಧ್ಯಾಹ್ನ 12ರಿಂದ 3ರ ವರೆಗೆ ಮನೆಯಿಂದ ಹೊರಗೆ ಹೋಗುವುದು</p>.<p>* ಬರಿಗಾಲಿನಲ್ಲಿ ಹೊರಗೆ ಹೋಗಬಾರದು</p>.<p><br />ಏನು ಮಾಡಬೇಕು?</p>.<p>* ಬಾಯಾರಿಕೆ ಎನಿಸಿದ್ದರೂ ಹೆಚ್ಚು ಕುಡಿಯಬೇಕು</p>.<p>* ಒಆರ್ಎಸ್ ಬಳಕೆ</p>.<p>* ಹಣ್ಣಿನ ಜ್ಯೂಸ್ (ಸ್ವಲ್ಪ ಉಪ್ಪು ಬೆರೆಸಬೇಕು), ಮಜ್ಜಿಗೆ/ಲಸ್ಸಿ ಕುಡಿಯಬೇಕು</p>.<p>* ಸಾಕಷ್ಟು ಗಾಳಿಯಾಡುವ ಹಾಗೂ ತಂಪಾದ ಒಳಾಂಗಣಗಳಲ್ಲಿ ಇರಬೇಕು</p>.<p>* ತೆಳುವಾದ ಅರಳೆಯ ವಸ್ತ್ರಗಳನ್ನು ಧರಿಸಬೇಕು</p>.<p>* ಹೊರಗಡೆ ಹೋಗುವ ಸಂದರ್ಭಗಳಲ್ಲಿ ಕೊಡೆ, ಟೊಪ್ಪಿಗೆ, ಟವಲ್ ಅಥವಾ ತಲೆಗೆ ಹೊದ್ದುಕೊಳ್ಳುವ ಸಾಂಪ್ರದಾಯಿಕ ವಸ್ತ್ರಗಳನ್ನು ಬಳಸಿ</p>.<p><br />108/102ಕ್ಕೆ ಕರೆ ಮಾಡಿ</p>.<p>ಬಿಸಿಗಾಳಿಯಿಂದಾಗಿ ಆರೋಗ್ಯದಲ್ಲಿ ಕಂಡುಬರುವ ಏರುಪೇರುಗಳತ್ತ ಗಮನ ಕೊಡಬೇಕು. ತಲೆಸುತ್ತು, ವಾಂತಿ, ತಲೆನೋವು, ವಿಪರೀತ ಬಾಯಾರಿಕೆ, ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ, ತೀವ್ರ ಉಸಿರಾಟ ಹಾಗೂ ಹೃದಯ ಬಡಿತದಲ್ಲಿ ಹೆಚ್ಚಳ ಕಂಡು ಬಂದರೆ ಕೂಡಲೇ ವೈದ್ಯಕೀಯ ಸಲಹೆ ಪಡೆಯಬೇಕು.</p>.<p>ತುರ್ತು ಸಂದರ್ಭಗಳಲ್ಲಿ ಶುಲ್ಕರಹಿತ ದೂರವಾಣಿ ಸಂಖ್ಯೆ 108 ಅಥವಾ 102 ಸಂಪರ್ಕಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>