ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುರೇವಿ ಚಂಡಮಾರುತ: ತಮಿಳುನಾಡು, ಪುದುಚೇರಿಯಲ್ಲಿ ಭಾರಿ ಮಳೆ

Last Updated 3 ಡಿಸೆಂಬರ್ 2020, 8:19 IST
ಅಕ್ಷರ ಗಾತ್ರ

ಚೆನ್ನೈ:ತಮಿಳುನಾಡಿನ ಕರಾವಳಿ ಪ್ರದೇಶವಾದ ಪಂಬನ್‌ ಮತ್ತು ಕನ್ಯಾಕುಮಾರಿಯನ್ನು ಹಾದು ಹೋಗಲು ಬುರೇವಿ ಚಂಡಮಾರುತ ಸಜ್ಜಾಗಿದ್ದು ತಮಿಳುನಾಡು ಮತ್ತು ಪುದುಚೇರಿಯ ಹಲವು ಭಾಗಗಳಲ್ಲಿ ಕಳೆದ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಶ್ರೀಲಂಕಾದಿಂದ ಚಂಡಮಾರುತವು ಗುರುವಾರ ಮಧ್ಯಾಹ್ನದ ಹೊತ್ತಿಗೆ ಪಂಬನ್‌ ಕರಾವಳಿ ಪ್ರದೇಶದ ಹತ್ತಿರ ತಲುಪಲಿದೆ ಎಂದು ಇಲಾಖೆ ತಿಳಿಸಿದೆ.

‘ಗುರುವಾರ ಮಧ್ಯಾಹ್ನದ ವೇಳೆಗೆ ಪಂಬನ್ ಪ್ರದೇಶದ ಪಶ್ಚಿಮ ದಿಕ್ಕಿನ ವಾರ್ಡ್‌ಗಳತ್ತ ಚಂಡಮಾರುತ ಚಲಿಸುವ ಸಾಧ್ಯತೆ. ಅಲ್ಲದೆ ಪಂಬನ್ ಮತ್ತು ಕನ್ಯಾಕುಮಾರಿ ಮೂಲಕ ದಕ್ಷಿಣ ತಮಿಳುನಾಡು ಕರಾವಳಿಯನ್ನು ದಾಟಲಿದೆ’ ಎಂದು ಐಎಂಡಿ ಟ್ವಿಟರ್‌ನಲ್ಲಿ ತಿಳಿಸಿದೆ.

ಈ ಚಂಡಮಾರುತದಿಂದಾಗಿ ತಿರುವರೂರು ಜಿಲ್ಲೆಯ ಕುಡವಾಸಲ್, ನಾಗಪಟ್ಟಣಂ, ವೇದರಣ್ಯಂ, ಕರೈಕಲ್‌, ತಿರುನಾತುರೈಪೂಂಡಿ ಮತ್ತು ರಾಮನಾಥಪುರಂನ ಮುಡುಕುಲತೂರ್‌ನಲ್ಲಿ ಕಳೆದ ರಾತ್ರಿಯಿಂದ ಇಂದು ಮುಂಜಾನೆ ತನಕ 9 ರಿಂದ 20 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT