‘ಖುನು ಲಾಮಾ ಅವರು ಯಾರ ಗಮನಕ್ಕೂ ಬರದಂತೆ ಇರುತ್ತಿದ್ದ ಕಾರಣ ಅವರನ್ನು ಹುಡುಕಲು ದಲೈ ಲಾಮಾ ಅವರು ಕಷ್ಟಪಟ್ಟಿದ್ದರು. ತಮ್ಮ ಪ್ರತಿನಿಧಿಗಳನ್ನು ದೇಶದ ಬಹುತೇಕ ಎಲ್ಲ ಬೌದ್ಧ ಧಾರ್ಮಿಕ ಕೇಂದ್ರಗಳಿಗೆ ದಲೈ ಲಾಮಾ ಕಳುಹಿಸಿದ್ದರು, ಆದರೆ ಖುನು ಲಾಮಾ ಅವರು ಪತ್ತೆಯಾಗಿರಲಿಲ್ಲ ಎಂದು‘ದಿ ದಲೈ ಲಾಮಾ ಸೆಂಟರ್ ಫಾರ್ ಎಥಿಕ್ಸ್ ಆ್ಯಂಡ್ ಟ್ರಾನ್ಸ್ಫಾರ್ಮೇಟಿವ್ ವ್ಯಾಲ್ಯೂಸ್’ ಕೇಂದ್ರದ ಅಧ್ಯಕ್ಷ ಟೆನ್ಜಿನ್ ಪ್ರಿಯದರ್ಶಿ ಅವರು ಬರೆದಿರುವ‘ರನ್ನಿಂಗ್ ಟುವರ್ಡ್ಸ್ ಮಿಸ್ಟರಿ: ದಿ ಅಡ್ವೆನ್ಚರ್ ಆಫ್ ಅನ್ಕನ್ವೆನ್ಷನಲ್ ಲೈಫ್’ನಲ್ಲಿ ತಿಳಿಸಲಾಗಿದೆ.