‘ಪುರುಷರಂತೆಯೇ ನಮಗೂ ಕಠಿಣವಾದ ತರಬೇತಿ ಇರುತ್ತದೆ. ಹೀಗಾಗಿ ನಾವು ಅವರು ಬೇರೆ ಅಲ್ಲ’ ಎಂದು ಅವರು ಹೇಳಿದರು. ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಸಿಆರ್ಪಿಎಫ್ ಮಹಿಳಾ ಸಿಬ್ಬಂದಿಯನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ನಿಯೋಜಿಸಲಾಗಿತ್ತು. ಆದರೆ, ಕೋವಿಡ್–19 ಪಿಡುಗಿನ ಕಾರಣ ಯಾತ್ರೆಯೇ ರದ್ದಾಗಿತ್ತು. ಶುಕ್ರವಾರ ನೌಗಮ್ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟ ಕಾರಣ ಸ್ವಾತಂತ್ರ್ಯ ದಿನದ ಅಂಗವಾಗಿ ಕಣಿವೆ ರಾಜ್ಯದಲ್ಲಿ ಶನಿವಾರ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.