<p>ನವದೆಹಲಿ: ‘ಪ್ರಚೋದಿಸಿದರೆ ಪ್ರಚಂಡ ಉತ್ತರ ನೀಡುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಡುಗಿದ್ದಾರೆ. ಆ ಮೂಲಕ ಅವರು ನೆರೆ ರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ರವಾನಿಸಿ<br />ದ್ದಾರೆ. ಚೀನಾ ಹಾಗೂ ಪಾಕಿಸ್ತಾನ ಜೊತೆಗಿನ ಬಿಕ್ಕಟ್ಟು ಹಸಿರಾಗಿರುವಾಗಲೇ ಮೋದಿ ಅವರು ನೀಡಿರುವ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದಿದೆ.</p>.<p>ರಾಜಸ್ಥಾನದ ಭಾರತ– ಪಾಕ್ ಗಡಿಯ ಲೊಂಗೆವಾಲಾದಲ್ಲಿ ಶನಿವಾರ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸತತ ಏಳನೇ ವರ್ಷ ಸೈನಿಕರ ಜೊತೆ ದೀಪಾವಳಿ ಆಚರಿಸಿದರು.</p>.<p>‘ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ ಮತ್ತು ತಿಳಿವಳಿಕೆ ಮೂಡಿಸುವ ನೀತಿಯನ್ನು ಭಾರತವು ಅನುಸರಿಸುತ್ತಾ ಬಂದಿದೆ. ನಮ್ಮ ಈ ಸಂಕಲ್ಪವನ್ನು ಪರೀಕ್ಷಿಸಲು ಯಾರಾದರೂ ಮುಂದಾ<br />ದರೆ, ತಕ್ಕ ಪ್ರತ್ಯುತ್ತರ ಪಡೆಯಲಿದ್ದಾರೆ. ವಿಸ್ತರಣಾ ನೀತಿ ಒಂದು ಮಾನಸಿಕ ರೋಗ. ಈ ನೀತಿಯು 18ನೇ ಶತಮಾನದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಜಗತ್ತು ತೊಂದರೆ ಅನುಭವಿಸುತ್ತಿದೆ. ಇದರ ವಿರುದ್ಧ ಭಾರತ ಧ್ವನಿ ಎತ್ತುತ್ತದೆ’ ಎಂದು ಪ್ರಧಾನಿ ಹೇಳಿದ್ದಾರೆ.</p>.<p>‘ದೇಶದ ಹಿತಾಸಕ್ತಿಯ ವಿಚಾರಗಳಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಇಡೀ ಜಗತ್ತಿಗೆ ಅರಿವಾಗಿದೆ. ಸರ್ಕಾರದ ದಿಟ್ಟ ನಿಲುವುಗಳಿಗೆ ಸೈನಿಕರ ಶೌರ್ಯವೇ ಕಾರಣ. ದಾಳಿಕೋರರಿಗೆ ತಿರುಗೇಟು ನೀಡಿದ್ದ ದೇಶಗಳು ಸುಭದ್ರವಾಗಿದ್ದವು ಎಂದು ಇತಿಹಾಸ ತಿಳಿಸುತ್ತದೆ’ ಎಂದರು.</p>.<p>1971ರಲ್ಲಿ ನಡೆದ ಲೊಂಗೆವಾಲ ಸಂಘರ್ಷವನ್ನು ಅವರು ಸ್ಮರಿಸಿದರು. ‘ಸೈನಿಕರ ಶೌರ್ಯದ ಮಾತು ಬಂದಾಗ ನೆನಪಾಗುವುದೇ ಲೊಂಗೆವಾಲ. ಅಂದು ಪಾಕಿಸ್ತಾನಕ್ಕೆ ನಮ್ಮ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದರು’ ಎಂದು ಪ್ರಧಾನಿ ಹೇಳಿದರು.</p>.<p><strong>ಸೈನಿಕರ ಕುರಿತು ಮೋದಿ ಮಾತು..</strong></p>.<p>*ದೇಶದ ಸೈನಿಕರ ಜೊತೆ 130 ಕೋಟಿ ಜನರು ಇದ್ದಾರೆ. ಯೋಧರ ಶೌರ್ಯಕ್ಕೆ ದೇಶವಾಸಿಗಳು ತಲೆಬಾಗುತ್ತಾರೆ</p>.<p>*ಕಾಡು, ಮರಳುಗಾಡು, ಸಮುದ್ರ–ಎಲ್ಲೇ ಆಗಲಿ, ತಮ್ಮ ಶೌರ್ಯದಿಂದ ಸೈನಿಕರು ಬಿಕ್ಕಟ್ಟುಗಳಿಂದ ಪಾರುಮಾಡಿದ್ದಾರೆ</p>.<p>*ಸೈನಿಕರ ಜೊತೆ ಕಳೆದಾಗಲೇ ನನ್ನ ದೀಪಾವಳಿ ಆಚರಣೆ ಸಂಪೂರ್ಣವಾಗುತ್ತದೆ</p>.<p>*ಯೋಧರ ಜತೆ ಸಮಯ ಕಳೆಯುವುದರಿಂದ, ದೇಶಕ್ಕೆ ಸೇವೆ ಸಲ್ಲಿಸುವ, ದೇಶ ರಕ್ಷಣೆಯ ಸಂಕಲ್ಪ ಬಲಗೊಳ್ಳುತ್ತದೆ</p>.<p>* ಪಾಕಿಸ್ತಾನದ ಸೈನ್ಯವು ಬಾಂಗ್ಲಾದೇಶದ ಮುಗ್ಧ ನಾಗರಿಕರನ್ನು ಭಯಭೀತಗೊಳಿಸಿ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಅದರ ಕೊಳಕು ಮುಖ ಬಹಿರಂಗವಾಗುತ್ತಿದೆ.</p>.<p><em><strong>-ನರೇಂದ್ರ ಮೋದಿ, ಪ್ರಧಾನಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ‘ಪ್ರಚೋದಿಸಿದರೆ ಪ್ರಚಂಡ ಉತ್ತರ ನೀಡುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಡುಗಿದ್ದಾರೆ. ಆ ಮೂಲಕ ಅವರು ನೆರೆ ರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ರವಾನಿಸಿ<br />ದ್ದಾರೆ. ಚೀನಾ ಹಾಗೂ ಪಾಕಿಸ್ತಾನ ಜೊತೆಗಿನ ಬಿಕ್ಕಟ್ಟು ಹಸಿರಾಗಿರುವಾಗಲೇ ಮೋದಿ ಅವರು ನೀಡಿರುವ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದಿದೆ.</p>.<p>ರಾಜಸ್ಥಾನದ ಭಾರತ– ಪಾಕ್ ಗಡಿಯ ಲೊಂಗೆವಾಲಾದಲ್ಲಿ ಶನಿವಾರ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸತತ ಏಳನೇ ವರ್ಷ ಸೈನಿಕರ ಜೊತೆ ದೀಪಾವಳಿ ಆಚರಿಸಿದರು.</p>.<p>‘ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ ಮತ್ತು ತಿಳಿವಳಿಕೆ ಮೂಡಿಸುವ ನೀತಿಯನ್ನು ಭಾರತವು ಅನುಸರಿಸುತ್ತಾ ಬಂದಿದೆ. ನಮ್ಮ ಈ ಸಂಕಲ್ಪವನ್ನು ಪರೀಕ್ಷಿಸಲು ಯಾರಾದರೂ ಮುಂದಾ<br />ದರೆ, ತಕ್ಕ ಪ್ರತ್ಯುತ್ತರ ಪಡೆಯಲಿದ್ದಾರೆ. ವಿಸ್ತರಣಾ ನೀತಿ ಒಂದು ಮಾನಸಿಕ ರೋಗ. ಈ ನೀತಿಯು 18ನೇ ಶತಮಾನದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಜಗತ್ತು ತೊಂದರೆ ಅನುಭವಿಸುತ್ತಿದೆ. ಇದರ ವಿರುದ್ಧ ಭಾರತ ಧ್ವನಿ ಎತ್ತುತ್ತದೆ’ ಎಂದು ಪ್ರಧಾನಿ ಹೇಳಿದ್ದಾರೆ.</p>.<p>‘ದೇಶದ ಹಿತಾಸಕ್ತಿಯ ವಿಚಾರಗಳಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಇಡೀ ಜಗತ್ತಿಗೆ ಅರಿವಾಗಿದೆ. ಸರ್ಕಾರದ ದಿಟ್ಟ ನಿಲುವುಗಳಿಗೆ ಸೈನಿಕರ ಶೌರ್ಯವೇ ಕಾರಣ. ದಾಳಿಕೋರರಿಗೆ ತಿರುಗೇಟು ನೀಡಿದ್ದ ದೇಶಗಳು ಸುಭದ್ರವಾಗಿದ್ದವು ಎಂದು ಇತಿಹಾಸ ತಿಳಿಸುತ್ತದೆ’ ಎಂದರು.</p>.<p>1971ರಲ್ಲಿ ನಡೆದ ಲೊಂಗೆವಾಲ ಸಂಘರ್ಷವನ್ನು ಅವರು ಸ್ಮರಿಸಿದರು. ‘ಸೈನಿಕರ ಶೌರ್ಯದ ಮಾತು ಬಂದಾಗ ನೆನಪಾಗುವುದೇ ಲೊಂಗೆವಾಲ. ಅಂದು ಪಾಕಿಸ್ತಾನಕ್ಕೆ ನಮ್ಮ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದರು’ ಎಂದು ಪ್ರಧಾನಿ ಹೇಳಿದರು.</p>.<p><strong>ಸೈನಿಕರ ಕುರಿತು ಮೋದಿ ಮಾತು..</strong></p>.<p>*ದೇಶದ ಸೈನಿಕರ ಜೊತೆ 130 ಕೋಟಿ ಜನರು ಇದ್ದಾರೆ. ಯೋಧರ ಶೌರ್ಯಕ್ಕೆ ದೇಶವಾಸಿಗಳು ತಲೆಬಾಗುತ್ತಾರೆ</p>.<p>*ಕಾಡು, ಮರಳುಗಾಡು, ಸಮುದ್ರ–ಎಲ್ಲೇ ಆಗಲಿ, ತಮ್ಮ ಶೌರ್ಯದಿಂದ ಸೈನಿಕರು ಬಿಕ್ಕಟ್ಟುಗಳಿಂದ ಪಾರುಮಾಡಿದ್ದಾರೆ</p>.<p>*ಸೈನಿಕರ ಜೊತೆ ಕಳೆದಾಗಲೇ ನನ್ನ ದೀಪಾವಳಿ ಆಚರಣೆ ಸಂಪೂರ್ಣವಾಗುತ್ತದೆ</p>.<p>*ಯೋಧರ ಜತೆ ಸಮಯ ಕಳೆಯುವುದರಿಂದ, ದೇಶಕ್ಕೆ ಸೇವೆ ಸಲ್ಲಿಸುವ, ದೇಶ ರಕ್ಷಣೆಯ ಸಂಕಲ್ಪ ಬಲಗೊಳ್ಳುತ್ತದೆ</p>.<p>* ಪಾಕಿಸ್ತಾನದ ಸೈನ್ಯವು ಬಾಂಗ್ಲಾದೇಶದ ಮುಗ್ಧ ನಾಗರಿಕರನ್ನು ಭಯಭೀತಗೊಳಿಸಿ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಅದರ ಕೊಳಕು ಮುಖ ಬಹಿರಂಗವಾಗುತ್ತಿದೆ.</p>.<p><em><strong>-ನರೇಂದ್ರ ಮೋದಿ, ಪ್ರಧಾನಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>