<p><strong>ವಾಷಿಂಗ್ಟನ್: </strong>ಕಳೆದ ವಾರ (ಜನವರಿ 27) ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸಿಟಿ ಸೆಂಟ್ರಲ್ ಪಾರ್ಕ್ನಲ್ಲಿರುವ ಮಹಾತ್ಮ ಗಾಂಧಿ ಕಂಚಿನ ಪುತ್ಥಳಿಯನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಭಾರತೀಯ ಅಮೆರಿಕನ್ ನಾಗರಿಕರು ಸೆಂಟ್ರಲ್ ಸಿಟಿ ಪಾರ್ಕ್ನಲ್ಲಿ ಶಾಂತಿ ಸಭೆ ನಡೆಸಿದರು.</p>.<p>ಇಂಡಿಯನ್ ಅಸೋಸಿಯೇಷನ್ ಆಫ್ ಸ್ಯಾಕ್ರಮೆಂಟೊ (ಐಎಎಸ್) ಮತ್ತು ಇತರ ಭಾರತೀಯ-ಅಮೆರಿಕನ್ ಮತ್ತು ಹಿಂದೂ-ಅಮೆರಿಕನ್ ಸಂಸ್ಥೆಗಳು ಜಂಟಿಯಾಗಿ ಶಾಂತಿ ಸಭೆಯನ್ನು ಆಯೋಜಿಸಿದ್ದವು.</p>.<p>ಸಭೆಯಲ್ಲಿ ಮಾತನಾಡಿದ ಡೇವಿಸ್ ನಗರದ ಮೇಯರ್ ಗ್ಲೋರಿಯಾ ಪಾರ್ಟಿಡ, ಘಟನೆ ಬಗ್ಗೆ ತೀವ್ರ ಅಘಾತ ವ್ಯಕ್ತಪಡಿಸಿದರು. ‘ಇದು ಕ್ಷಮಿಸಲಾರದ ಕೃತ್ಯ. ಗಾಂಧಿ ನಮ್ಮೆಲ್ಲರ ಸ್ಪೂರ್ತಿ. ಇಂಥ ವಿಧ್ವಂಸಕ ಕೃತ್ಯಗಳನ್ನು ನಾವೆಂದೂ ಸಹಿಸುವುದಿಲ್ಲ‘ ಎಂದು ಹೇಳಿದರು.</p>.<p>ಶಾಂತಿ ಸಭೆ ನಡೆಯುವ ವೇಳೆ, ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ನೇತೃತ್ವದ ‘ಆರ್ಗನೈಸೇಶನ್ ಫಾರ್ ಮೈನಾರಿಟಿಸ್ ಇನ್ ಇಂಡಿಯಾ‘ (ಒಎಫ್ಎಂಐ) ಸದಸ್ಯರು, ಗಾಂಧಿ ವಿರುದ್ಧ ಕೆಟ್ಟ ಪದಗಳೊಂದಿಗೆ ಘೋಷಣೆಗಳನ್ನು ಕೂಗಿದರು ಮತ್ತು ಶಾಂತಿ ಸಭೆಯನ್ನು ಭಂಗಗೊಳಿಸಲು ಪ್ರಯತ್ನಿಸಿದರು.</p>.<p>ಇದೇ ವೇಳೆ ಪ್ರತಿಭಟನಾಕಾರರು ಗಾಂಧಿ ಪುತ್ಥಳಿಯನ್ನು ಪಾರ್ಕ್ನಲ್ಲಿ ಮರು ಸ್ಥಾಪಿಸಕೂಡದು ಎಂದು ಒತ್ತಾಯಿಸಿದರು. ಪ್ರತಿಭಟನೆಯ ಭಾಗವಾಗಿದ್ದ ಒಎಫ್ಎಂಐ ಸಂಘಟನೆಯ ನಾನಕ್ ಭಟ್ಟಿ, ‘ಡೇವಿಸ್ ನಗರ ಗಾಂಧಿ ಪುತ್ಥಳಿಯನ್ನು ಸ್ಥಾಪಿಸಲು ಸೂಕ್ತವಾದ ಸ್ಥಳವಲ್ಲ. ಈ ಮೊದಲು ಪುತ್ಥಳಿಯನ್ನು ಏಕೆ ಸ್ಥಾಪಿಸಿದ್ದಾರೆ?‘ ಎಂದು ಪ್ರಶ್ನಿಸಿದರು.</p>.<p>‘ಖಾಲಿಸ್ತಾನ್ ಪರ ಪ್ರತಿಭಟನಾಕಾರರು ಈ ಸಭೆಯನ್ನು ನಿಲ್ಲಿಸುವ ಸಲುವಾಗಿ, ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಬೆದರಿಕೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಮಹಿಳಾ ಭಾಷಣಕಾರರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದರು‘ ಎಂದು ಸಭೆ ಆಯೋಜಿಸಿದ್ದ ಐಎಎಸ್ ಸಂಘಟಕರು ತಿಳಿಸಿದರು.</p>.<p>‘ಗದ್ದಲ ಉಂಟು ಮಾಡುತ್ತಿದ್ದ ಖಾಲಿಸ್ತಾನ್ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಆಯೋಜಕರು ಪೊಲೀಸರನ್ನು ಕರೆಸಿದರು. ಮಹಿಳೆಯರ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ‘ ಎಂದು ಸಂಘ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ಶಾಂತಿ ಸಭೆಯ ಆಯೋಜಕರ ಪ್ರಕಾರ, 2016ರಲ್ಲಿ ಈ ಡೇವಿಸ್ ನಗರದ ಸಿಟಿ ಸೆಂಟ್ರಲ್ ಪಾರ್ಕ್ನಲ್ಲಿ ಗಾಂಧಿ ಪುತ್ಥಳಿ ಪ್ರತಿಷ್ಠಾಪಿಸಿದಾಗಿನಿಂದ, ಅದನ್ನು ತೆಗೆಯುವಂತೆ ಖಾಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಯ (ಒಎಫ್ಎಂಐ) ನಾಯಕರಾದ ಭಜನ್ ಸಿಂಗ್ ಭಿಂದಾರ್ ಮತ್ತು ಪೀಟರ್ ಫ್ರೆಡ್ರಿಚ್ ಒತ್ತಾಯಿಸುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್: </strong>ಕಳೆದ ವಾರ (ಜನವರಿ 27) ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸಿಟಿ ಸೆಂಟ್ರಲ್ ಪಾರ್ಕ್ನಲ್ಲಿರುವ ಮಹಾತ್ಮ ಗಾಂಧಿ ಕಂಚಿನ ಪುತ್ಥಳಿಯನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಭಾರತೀಯ ಅಮೆರಿಕನ್ ನಾಗರಿಕರು ಸೆಂಟ್ರಲ್ ಸಿಟಿ ಪಾರ್ಕ್ನಲ್ಲಿ ಶಾಂತಿ ಸಭೆ ನಡೆಸಿದರು.</p>.<p>ಇಂಡಿಯನ್ ಅಸೋಸಿಯೇಷನ್ ಆಫ್ ಸ್ಯಾಕ್ರಮೆಂಟೊ (ಐಎಎಸ್) ಮತ್ತು ಇತರ ಭಾರತೀಯ-ಅಮೆರಿಕನ್ ಮತ್ತು ಹಿಂದೂ-ಅಮೆರಿಕನ್ ಸಂಸ್ಥೆಗಳು ಜಂಟಿಯಾಗಿ ಶಾಂತಿ ಸಭೆಯನ್ನು ಆಯೋಜಿಸಿದ್ದವು.</p>.<p>ಸಭೆಯಲ್ಲಿ ಮಾತನಾಡಿದ ಡೇವಿಸ್ ನಗರದ ಮೇಯರ್ ಗ್ಲೋರಿಯಾ ಪಾರ್ಟಿಡ, ಘಟನೆ ಬಗ್ಗೆ ತೀವ್ರ ಅಘಾತ ವ್ಯಕ್ತಪಡಿಸಿದರು. ‘ಇದು ಕ್ಷಮಿಸಲಾರದ ಕೃತ್ಯ. ಗಾಂಧಿ ನಮ್ಮೆಲ್ಲರ ಸ್ಪೂರ್ತಿ. ಇಂಥ ವಿಧ್ವಂಸಕ ಕೃತ್ಯಗಳನ್ನು ನಾವೆಂದೂ ಸಹಿಸುವುದಿಲ್ಲ‘ ಎಂದು ಹೇಳಿದರು.</p>.<p>ಶಾಂತಿ ಸಭೆ ನಡೆಯುವ ವೇಳೆ, ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ನೇತೃತ್ವದ ‘ಆರ್ಗನೈಸೇಶನ್ ಫಾರ್ ಮೈನಾರಿಟಿಸ್ ಇನ್ ಇಂಡಿಯಾ‘ (ಒಎಫ್ಎಂಐ) ಸದಸ್ಯರು, ಗಾಂಧಿ ವಿರುದ್ಧ ಕೆಟ್ಟ ಪದಗಳೊಂದಿಗೆ ಘೋಷಣೆಗಳನ್ನು ಕೂಗಿದರು ಮತ್ತು ಶಾಂತಿ ಸಭೆಯನ್ನು ಭಂಗಗೊಳಿಸಲು ಪ್ರಯತ್ನಿಸಿದರು.</p>.<p>ಇದೇ ವೇಳೆ ಪ್ರತಿಭಟನಾಕಾರರು ಗಾಂಧಿ ಪುತ್ಥಳಿಯನ್ನು ಪಾರ್ಕ್ನಲ್ಲಿ ಮರು ಸ್ಥಾಪಿಸಕೂಡದು ಎಂದು ಒತ್ತಾಯಿಸಿದರು. ಪ್ರತಿಭಟನೆಯ ಭಾಗವಾಗಿದ್ದ ಒಎಫ್ಎಂಐ ಸಂಘಟನೆಯ ನಾನಕ್ ಭಟ್ಟಿ, ‘ಡೇವಿಸ್ ನಗರ ಗಾಂಧಿ ಪುತ್ಥಳಿಯನ್ನು ಸ್ಥಾಪಿಸಲು ಸೂಕ್ತವಾದ ಸ್ಥಳವಲ್ಲ. ಈ ಮೊದಲು ಪುತ್ಥಳಿಯನ್ನು ಏಕೆ ಸ್ಥಾಪಿಸಿದ್ದಾರೆ?‘ ಎಂದು ಪ್ರಶ್ನಿಸಿದರು.</p>.<p>‘ಖಾಲಿಸ್ತಾನ್ ಪರ ಪ್ರತಿಭಟನಾಕಾರರು ಈ ಸಭೆಯನ್ನು ನಿಲ್ಲಿಸುವ ಸಲುವಾಗಿ, ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಬೆದರಿಕೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಮಹಿಳಾ ಭಾಷಣಕಾರರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದರು‘ ಎಂದು ಸಭೆ ಆಯೋಜಿಸಿದ್ದ ಐಎಎಸ್ ಸಂಘಟಕರು ತಿಳಿಸಿದರು.</p>.<p>‘ಗದ್ದಲ ಉಂಟು ಮಾಡುತ್ತಿದ್ದ ಖಾಲಿಸ್ತಾನ್ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಆಯೋಜಕರು ಪೊಲೀಸರನ್ನು ಕರೆಸಿದರು. ಮಹಿಳೆಯರ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ‘ ಎಂದು ಸಂಘ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ಶಾಂತಿ ಸಭೆಯ ಆಯೋಜಕರ ಪ್ರಕಾರ, 2016ರಲ್ಲಿ ಈ ಡೇವಿಸ್ ನಗರದ ಸಿಟಿ ಸೆಂಟ್ರಲ್ ಪಾರ್ಕ್ನಲ್ಲಿ ಗಾಂಧಿ ಪುತ್ಥಳಿ ಪ್ರತಿಷ್ಠಾಪಿಸಿದಾಗಿನಿಂದ, ಅದನ್ನು ತೆಗೆಯುವಂತೆ ಖಾಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಯ (ಒಎಫ್ಎಂಐ) ನಾಯಕರಾದ ಭಜನ್ ಸಿಂಗ್ ಭಿಂದಾರ್ ಮತ್ತು ಪೀಟರ್ ಫ್ರೆಡ್ರಿಚ್ ಒತ್ತಾಯಿಸುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>