ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಮೂಲದ ಐವರು ನುಸುಳುಕೋರರನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

Last Updated 22 ಆಗಸ್ಟ್ 2020, 6:37 IST
ಅಕ್ಷರ ಗಾತ್ರ

ಪಂಜಾಬ್‌: ಇಲ್ಲಿನ ತಾರ್ನ್ ತರಣ್ ಜಿಲ್ಲೆಯ ದಾಲ್ ಗ್ರಾಮದ ಬಳಿ ಪಾಕಿಸ್ತಾನದಿಂದ ಭಾರತದೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಐವರು ನುಸುಳುಕೋರರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶನಿವಾರ ಹೊಡೆದುರುಳಿಸಿದೆ.

ಗುಂಡೇಟು ತಿಂದು ಸಾವಿಗೀಡಾದ ಐವರಲ್ಲಿ ಒಬ್ಬನಿಂದ ಎಕೆ ಸರಣಿಯ ರೈಫಲ್ ಅನ್ನು ಬಿಎಸ್ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಪಾಕಿಸ್ತಾನ ಕಡೆಯಿಂದ ಬಂದಿದ್ದ ಐವರು ಭಾರತದೊಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದ್ದಾರೆ.ಆ ಸಂದರ್ಭದಲ್ಲಿಯೋಧರು ಅವರನ್ನು ತಡೆಯಲುಮುಂದಾಗಿದ್ದಾರೆ.ಸೈನಿಕರ ಗುರಿಯಾಗಿಸಿನುಸುಳುಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಪ್ರತಿ ದಾಳಿ ನಡೆಸಿರುವ ಬಿಎಸ್‌ಎಫ್‌ ಸಿಬ್ಬಂದಿ ಐವರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT