ರಾಂಚಿ: ‘ಚುನಾವಣಾ ಆಯೋಗವು ನನ್ನನ್ನು ಅನರ್ಹಗೊಳಿಸಲು ಶಿಫಾರಸು ಮಾಡಿದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಿ’ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ರಾಜ್ಯಪಾಲ ರಮೇಶ್ ಬೈಸ್ ಅವರನ್ನು ಆಗ್ರಹಿಸಿದ್ದಾರೆ.
ರಾಜ್ಯಪಾಲರನ್ನು ಗುರುವಾರ ಭೇಟಿ ಮಾಡಿ, ಮನವಿ ಪತ್ರ ನೀಡಿದ ಸೊರೇನ್, ‘ಶಾಸಕರನ್ನು ಖರೀದಿಸಲು, ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯು ಈ ‘ಅನಿಶ್ಚಿತ ವಾತಾವರಣ’ವನ್ನು ಬಳಸಿಕೊಳ್ಳುತ್ತಿದೆ’ ಎಂದೂ ಆರೋಪಿಸಿದ್ದಾರೆ.
‘ಚುನಾವಣಾ ಆಯೋಗ ಏನು ಹೇಳಿದೆ ಎನ್ನುವ ಪತ್ರವನ್ನು ಬಹಿರಂಗಪಡಿಸಿ. ಈ ಕುರಿತು ಆದಷ್ಟು ಬೇಗ ಸೂಕ್ತ ವಿಚಾರಣೆ ನಡೆದು, ಈ ‘ಅನಿಶ್ಚಿತ ವಾತಾವರಣ’ವನ್ನು ಅಂತ್ಯಗೊಳಿಸಿ. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಇಂಥ ವಾತಾವರಣ ಮಾರಕವಾಗಲಿದೆ’ ಎಂದಿದ್ದಾರೆ.