ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಜಿತಿನ್ ಕೆಲಸ ಮಾಡಿದ್ದರು. ಮೂರು ತಲೆಮಾರುಗಳಿಂದ ತಮ್ಮ ಕುಟುಂಬ ಸಂಬಂಧ ಹೊಂದಿದ್ದ ಕಾಂಗ್ರೆಸ್ ಪಕ್ಷ ತೊರೆದ ಪ್ರಸಾದ್, ಬುಧವಾರ ಬಿಜೆಪಿಗೆ ಸೇರಿಕೊಂಡರು. ಅದೇ ಸಂದರ್ಭ, ಬಿಜೆಪಿ ಮಾತ್ರ ‘ಏಕೈಕ ನಿಜವಾದ ರಾಷ್ಟ್ರೀಯ ಪಕ್ಷ’ ಎಂದು ಹೇಳಿದ್ದರು.