<p class="title"><strong>ನವದೆಹಲಿ:</strong> ಸಲಿಂಗಕಾಮಿಗಳನ್ನು ಒಳಗೊಂಡಂತೆ ಜಾಹೀರಾತು ರೂಪಿಸುವ ಮನಸ್ಥಿತಿ ಕುರಿತುಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.</p>.<p class="title">‘ಕರ್ವ ಚೌತ್’ ಹಬ್ಬ ಆಚರಿಸುವಂತೆ ಡಾಬರ್ ಸಂಸ್ಥೆಯು ರೂಪಿಸಿದ್ದ ಜಾಹೀರಾತು ವಿರುದ್ಧ ಈಚೆಗೆ ಆಕ್ರೋಶ ವ್ಯಕ್ತವಾಗಿತ್ತು. ‘ಈ ಜಾಹೀರಾತು ಮೂಲಕ ಕಂಪನಿಯು ಸಾರ್ವಜನಿಕ ಅಸಹಿಷ್ಣುತೆಗೆ ಕಾರಣವಾಗುತ್ತಿದೆ’ ಎಂದೂ ಅವರು ಹೇಳಿದರು.</p>.<p class="title">‘ಕಾನೂನು ಜಾಗೃತಿಯಿಂದ ಮಹಿಳಾ ಸಬಲೀಕರಣ‘ ವಿಷಯ ಕುರಿತಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಮಾತನಾಡುತ್ತಿದ್ದರು.</p>.<p>ಮಹಿಳೆಯರಿಗೆ ಸಂಬಂಧಿಸಿ ವಿಷಯಗಳ ಕುರಿತು ಕೇವಲ ಜಾಗೃತಿ ಮೂಡಿಸುವುದಷ್ಟೇ ಅಲ್ಲ, ಈ ಕುರಿತಂತೆ ಸಮಾಜದಲ್ಲಿನ ಯುವಕರಲ್ಲಿನ ಮನಸ್ಥಿತಿಯನ್ನು ಬದಲಿಸುವುದು ಕೂಡಾ ಅಗತ್ಯವಾಗಿದೆ ಎಂದೂ ಅವರು ಪ್ರತಿಪಾದಿಸಿದರು</p>.<p class="title">ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು ನಿಜ ಬದುಕಿನ ಹಲವು ಘಟನೆಗಳನ್ನು ಗಮನಿಸಿದ್ದಾರೆ. ಇದು, ಕಾನೂನಿನ ಸ್ಥಿತಿ ಮತ್ತು ಸಮಾಜದ ವಾಸ್ತವ ಸ್ಥಿತಿ ಭಿನ್ನವಾಗಿರುವುದನ್ನು ಬಿಂಬಿಸುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು.</p>.<p class="title">‘ಸಂವಿಧಾನ ಎಂಬುದು ಬದಲಾವಣೆಗೆ ಒಳಪಡುವ ದಾಖಲೆ. ಇದು, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬೇರೂರಿರುವ ಅನೇಕ ಸಾಂಸ್ಥಿಕ ಅಸಮಾನತೆಗಳಿಗೆ ಪರಿಹಾರ ನೀಡಬಲ್ಲದು. ಮಹಿಳೆಗೆ ಸಾರ್ವಜನಿಕವಾಗಿ ಘನತೆ ಮತ್ತು ಸಮಾನತೆಯನ್ನು ಒದಗಿಸಲು ಇದು ಪರಿಣಾಮಕಾರಿ ಸಾಧನ. ಮಹಿಳೆಗೆ ಸಾಂವಿಧಾನಿಕ ಹಕ್ಕು ಒದಗಿಸುವ ಈ ಗುರಿ ಸಾಧನೆಗಾಗಿ ಕೌಟುಂಬಿಕ ದೌರ್ಜನ್ಯ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆಗಳು ರಚನೆಯಾಗಿವೆ‘ ಎಂದೂ ಅವರು ಉಲ್ಲೇಖಿಸಿದರು.</p>.<p class="title">ಹಿಂದೂಗಳ ಹಬ್ಬಗಳ ಆಚರಣೆಗೆ ಸಂಬಂಧಿಸಿದ ಜಾಹೀರಾತುಗಳ ವಿರುದ್ಧ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿರುವ ಅನೇಕ ನಿದರ್ಶನಗಳಿವೆ. ಇಂಥ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಈಚೆಗೆ ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆಯನ್ನು ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ಸಲಿಂಗಕಾಮಿಗಳನ್ನು ಒಳಗೊಂಡಂತೆ ಜಾಹೀರಾತು ರೂಪಿಸುವ ಮನಸ್ಥಿತಿ ಕುರಿತುಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.</p>.<p class="title">‘ಕರ್ವ ಚೌತ್’ ಹಬ್ಬ ಆಚರಿಸುವಂತೆ ಡಾಬರ್ ಸಂಸ್ಥೆಯು ರೂಪಿಸಿದ್ದ ಜಾಹೀರಾತು ವಿರುದ್ಧ ಈಚೆಗೆ ಆಕ್ರೋಶ ವ್ಯಕ್ತವಾಗಿತ್ತು. ‘ಈ ಜಾಹೀರಾತು ಮೂಲಕ ಕಂಪನಿಯು ಸಾರ್ವಜನಿಕ ಅಸಹಿಷ್ಣುತೆಗೆ ಕಾರಣವಾಗುತ್ತಿದೆ’ ಎಂದೂ ಅವರು ಹೇಳಿದರು.</p>.<p class="title">‘ಕಾನೂನು ಜಾಗೃತಿಯಿಂದ ಮಹಿಳಾ ಸಬಲೀಕರಣ‘ ವಿಷಯ ಕುರಿತಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಮಾತನಾಡುತ್ತಿದ್ದರು.</p>.<p>ಮಹಿಳೆಯರಿಗೆ ಸಂಬಂಧಿಸಿ ವಿಷಯಗಳ ಕುರಿತು ಕೇವಲ ಜಾಗೃತಿ ಮೂಡಿಸುವುದಷ್ಟೇ ಅಲ್ಲ, ಈ ಕುರಿತಂತೆ ಸಮಾಜದಲ್ಲಿನ ಯುವಕರಲ್ಲಿನ ಮನಸ್ಥಿತಿಯನ್ನು ಬದಲಿಸುವುದು ಕೂಡಾ ಅಗತ್ಯವಾಗಿದೆ ಎಂದೂ ಅವರು ಪ್ರತಿಪಾದಿಸಿದರು</p>.<p class="title">ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು ನಿಜ ಬದುಕಿನ ಹಲವು ಘಟನೆಗಳನ್ನು ಗಮನಿಸಿದ್ದಾರೆ. ಇದು, ಕಾನೂನಿನ ಸ್ಥಿತಿ ಮತ್ತು ಸಮಾಜದ ವಾಸ್ತವ ಸ್ಥಿತಿ ಭಿನ್ನವಾಗಿರುವುದನ್ನು ಬಿಂಬಿಸುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು.</p>.<p class="title">‘ಸಂವಿಧಾನ ಎಂಬುದು ಬದಲಾವಣೆಗೆ ಒಳಪಡುವ ದಾಖಲೆ. ಇದು, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬೇರೂರಿರುವ ಅನೇಕ ಸಾಂಸ್ಥಿಕ ಅಸಮಾನತೆಗಳಿಗೆ ಪರಿಹಾರ ನೀಡಬಲ್ಲದು. ಮಹಿಳೆಗೆ ಸಾರ್ವಜನಿಕವಾಗಿ ಘನತೆ ಮತ್ತು ಸಮಾನತೆಯನ್ನು ಒದಗಿಸಲು ಇದು ಪರಿಣಾಮಕಾರಿ ಸಾಧನ. ಮಹಿಳೆಗೆ ಸಾಂವಿಧಾನಿಕ ಹಕ್ಕು ಒದಗಿಸುವ ಈ ಗುರಿ ಸಾಧನೆಗಾಗಿ ಕೌಟುಂಬಿಕ ದೌರ್ಜನ್ಯ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆಗಳು ರಚನೆಯಾಗಿವೆ‘ ಎಂದೂ ಅವರು ಉಲ್ಲೇಖಿಸಿದರು.</p>.<p class="title">ಹಿಂದೂಗಳ ಹಬ್ಬಗಳ ಆಚರಣೆಗೆ ಸಂಬಂಧಿಸಿದ ಜಾಹೀರಾತುಗಳ ವಿರುದ್ಧ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿರುವ ಅನೇಕ ನಿದರ್ಶನಗಳಿವೆ. ಇಂಥ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಈಚೆಗೆ ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆಯನ್ನು ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>