ಹುತಾತ್ಮ ಯೋಧನ ಕುಟುಂಬಕ್ಕೆ ಘೋಷಣೆ ಮಾಡಿದ್ದ ಆಶ್ವಾಸನೆ ಈಡೇರಿಸುವಂತೆ ಕೋರಿ ಪತ್ನಿ ಮತ್ತು ಮಗ ಸಿಎಂ ಅವರನ್ನು ಭೇಟಿ ಮಾಡಲು ಪ್ರಯತ್ನಸಿದ್ದರು. ಆದರೆ ಅವರನ್ನು ಅವಮಾನಿಸಿ, ಹೊರಗೆ ಕಳುಹಿಸಲಾಗಿದೆ. ಇದು ದುಃಖಕರ ಘಟನೆ. ಬಿಜೆಪಿಯಲ್ಲಿರುವ ಜನರಿಗೆ ಹುತಾತ್ಮರನ್ನು ಗೌರವಿಸುವುದು ಹೇಗೆ ತಿಳಿದಿರಲು ಸಾದ್ಯ? ಬ್ರಿಟಿಷರಂತೆ ಬಿಜೆಪಿ ಸಮಾಜದ ಭಾವೈಕ್ಯತೆ ವಿರುದ್ಧ ಕೆಲಸ ಮಾಡುತ್ತಿದೆ. ಇದರ ಗುರಿಯೂ ಸಮಾಜವನ್ನು ಒಡೆಯುವುದಾಗಿದೆ. ಇದರ ಬಗ್ಗೆ ಜಾಗೃತರಾಗಬೇಕಿದೆ ಎಂದು ಅಖಿಲೇಶ್ ಹೇಳಿದ್ದಾರೆ.