ದಲಿತ ನಾಯಕರಾಗಿರುವ, ಜಿಗ್ನೇಶ್ ಮೇವಾನಿ ಸದ್ಯ ಗುಜರಾತ್ನ ವಡ್ಗಾಮ್ ಕ್ಷೇತ್ರದ ಶಾಸಕರೂ ಹೌದು. ಇನ್ನು ಸಿಪಿಐ ನಾಯಕರಾಗಿರುವ ಕನ್ಹಯ್ಯ ಕುಮಾರ್ ಕಳೆದ ಬಾರಿ ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಸೋತಿದ್ದರು. ಬಿಹಾರದಲ್ಲಿ ಕಳೆಗುಂದಿರುವ ಕಾಂಗ್ರೆಸ್ಗೆ ಚೈತನ್ಯ ನೀಡಲು ಕನ್ಹಯ್ಯ ಕುಮಾರ್ ಅವರ ಸೇರ್ಪಡೆಯು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.