<p><strong>ಕಾನ್ಪುರ:</strong> ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಇದೇ 20ರಂದು ಮತದಾನ ನಡೆಯಲಿದೆ. ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹೊಸ ತಂತ್ರದ ಮೊರೆಹೋಗಿದೆ.</p>.<p>ಹಾಲು, ಬ್ರೆಡ್ ಮಾರಾಟದ ವೇಳೆ ಗ್ರಾಹಕರಿಗೆ ಮತದಾನ ಜಾಗೃತಿ ಸಂದೇಶ ಕಳುಹಿಸಲು ಆಡಳಿತ ಮುಂದಾಗಿದೆ. ಮುಂದಿನ ವಾರದಿಂದ ಹಾಲು, ಬ್ರೆಡ್ ಖರೀದಿಸಿದ ಗ್ರಾಹಕರಿಗೆ ‘ಫೆಬ್ರುವರಿ 20ರಂದು ಕಾನ್ಪುರ ಮತದಾನ’ ಎಂಬ ಸಂದೇಶ ಕಳುಹಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ನೇಹಾ ಶರ್ಮಾ ಈ ಯೋಜನೆ ರೂಪಿಸಿದ್ದು, ಬ್ರೆಡ್ ಮತ್ತು ಹಾಲು ಮಾರಾಟ ಕಂಪನಿಗಳ ಜತೆ ಈಗಾಗಲೇ ಸಭೆ ನಡೆಸಿದ್ದಾರೆ.</p>.<p><a href="https://www.prajavani.net/india-news/mamata-banerjee-dissolves-all-existing-posts-in-trinamool-congress-910527.html" itemprop="url">ತೃಣಮೂಲ ಕಾಂಗ್ರೆಸ್ನ ಎಲ್ಲ ಹುದ್ದೆಗಳನ್ನು ವಿಸರ್ಜಿಸಿದ ಮಮತಾ ಬ್ಯಾನರ್ಜಿ </a></p>.<p>ಈ ಪ್ರಸ್ತಾವಕ್ಕೆ ಜಿಎಸ್ಟಿ ಮತ್ತು ಆಹಾರ ಸುರಕ್ಷತಾ ಇಲಾಖೆಯೂ ಬೆಂಬಲ ಸೂಚಿಸಿದೆ. ಒಂದು ವಾರದಲ್ಲಿ 2.5 ಲಕ್ಷ ಮನೆಗಳಿಗೆ ಮತದಾನ ಜಾಗೃತಿ ಸಂದೇಶ ಕಳುಹಿಸುವುದಾಗಿ ಹಾಲಿನ ಉತ್ಪನ್ನ, ಬ್ರೆಡ್ ತಯಾರಕರು ಭರವಸೆ ನೀಡಿದ್ದಾರೆ.</p>.<p>ಈ ಅಭಿಯಾನದಲ್ಲಿ ಸಕ್ರಿಯವಾಗಿ ಕೈಜೋಡಿಸುವಂತೆ ಎಲ್ಲ ಪ್ರತಿನಿಧಿಗಳಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನ್ಪುರ:</strong> ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಇದೇ 20ರಂದು ಮತದಾನ ನಡೆಯಲಿದೆ. ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹೊಸ ತಂತ್ರದ ಮೊರೆಹೋಗಿದೆ.</p>.<p>ಹಾಲು, ಬ್ರೆಡ್ ಮಾರಾಟದ ವೇಳೆ ಗ್ರಾಹಕರಿಗೆ ಮತದಾನ ಜಾಗೃತಿ ಸಂದೇಶ ಕಳುಹಿಸಲು ಆಡಳಿತ ಮುಂದಾಗಿದೆ. ಮುಂದಿನ ವಾರದಿಂದ ಹಾಲು, ಬ್ರೆಡ್ ಖರೀದಿಸಿದ ಗ್ರಾಹಕರಿಗೆ ‘ಫೆಬ್ರುವರಿ 20ರಂದು ಕಾನ್ಪುರ ಮತದಾನ’ ಎಂಬ ಸಂದೇಶ ಕಳುಹಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ನೇಹಾ ಶರ್ಮಾ ಈ ಯೋಜನೆ ರೂಪಿಸಿದ್ದು, ಬ್ರೆಡ್ ಮತ್ತು ಹಾಲು ಮಾರಾಟ ಕಂಪನಿಗಳ ಜತೆ ಈಗಾಗಲೇ ಸಭೆ ನಡೆಸಿದ್ದಾರೆ.</p>.<p><a href="https://www.prajavani.net/india-news/mamata-banerjee-dissolves-all-existing-posts-in-trinamool-congress-910527.html" itemprop="url">ತೃಣಮೂಲ ಕಾಂಗ್ರೆಸ್ನ ಎಲ್ಲ ಹುದ್ದೆಗಳನ್ನು ವಿಸರ್ಜಿಸಿದ ಮಮತಾ ಬ್ಯಾನರ್ಜಿ </a></p>.<p>ಈ ಪ್ರಸ್ತಾವಕ್ಕೆ ಜಿಎಸ್ಟಿ ಮತ್ತು ಆಹಾರ ಸುರಕ್ಷತಾ ಇಲಾಖೆಯೂ ಬೆಂಬಲ ಸೂಚಿಸಿದೆ. ಒಂದು ವಾರದಲ್ಲಿ 2.5 ಲಕ್ಷ ಮನೆಗಳಿಗೆ ಮತದಾನ ಜಾಗೃತಿ ಸಂದೇಶ ಕಳುಹಿಸುವುದಾಗಿ ಹಾಲಿನ ಉತ್ಪನ್ನ, ಬ್ರೆಡ್ ತಯಾರಕರು ಭರವಸೆ ನೀಡಿದ್ದಾರೆ.</p>.<p>ಈ ಅಭಿಯಾನದಲ್ಲಿ ಸಕ್ರಿಯವಾಗಿ ಕೈಜೋಡಿಸುವಂತೆ ಎಲ್ಲ ಪ್ರತಿನಿಧಿಗಳಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>