<p><strong>ಡೆಹ್ರಾಡೂನ್:</strong> ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥದಲ್ಲಿರುವ ಶಿವನ ದೇವಸ್ಥಾನ ಮೇ 17ರಂದು ಭಕ್ತರಿಗೆ ಮುಕ್ತವಾಗಲಿದೆ ಎಂದು ಉತ್ತರಾಖಂಡ ಚಾರ್ಧಾಮ್ ದೇವಸ್ಥಾನಂ ವ್ಯವಸ್ಥಾಪಕ ಮಂಡಳಿ ಗುರುವಾರ ತಿಳಿಸಿದೆ.</p>.<p>ಚಳಿಗಾಲ ಆರಂಭಗೊಂಡ ನಂತರ ಶಿವನ ವಿಗ್ರಹವನ್ನು ಊಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗುತ್ತದೆ. ಮೇ 14ರಂದು ಶಿವನ ವಿಗ್ರಹವನ್ನು ಓಂಕಾರೇಶ್ವರ ದೇವಾಲಯದಿಂದ ಹೊರ ತೆಗೆದು, ಮೇ 17ರಿಂದ ದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಂಡಳಿಯ ವಕ್ತಾರರೊಬ್ಬರು ಹೇಳಿದರು.</p>.<p>ಈ ದೇವಸ್ಥಾನವನ್ನು ಕಳೆದ ವರ್ಷ ನವೆಂಬರ್ 16ರಂದು ಮುಚ್ಚಲಾಗಿತ್ತು.</p>.<p>ಕಳೆದ ವರ್ಷ ನವೆಂಬರ್ 19ರಂದು ಮುಚ್ಚಲಾಗಿದ್ದ ಬದರಿನಾಥ ದೇವಸ್ಥಾನವನ್ನು ಮೇ 18ರಂದು ತೆರೆಯಲಾಗುವುದು. ಗಂಗೋತ್ರಿ ಹಾಗೂ ಯಮುನೋತ್ರಿ ದೇವಾಲಯಗಳನ್ನು ಸಹ ಮೇ 14ರಂದು ಭಕ್ತರಿಗೆ ಮುಕ್ತಗೊಳಿಸಲಾಗುವುದು.</p>.<p>ಈ ನಾಲ್ಕು ದೇವಾಲಯಗಳನ್ನು ಭಕ್ತರಿಗೆ ಮುಕ್ತಗೊಳಿಸಿದ ನಂತರ ಚಾರ್ಧಾಮ್ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್:</strong> ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥದಲ್ಲಿರುವ ಶಿವನ ದೇವಸ್ಥಾನ ಮೇ 17ರಂದು ಭಕ್ತರಿಗೆ ಮುಕ್ತವಾಗಲಿದೆ ಎಂದು ಉತ್ತರಾಖಂಡ ಚಾರ್ಧಾಮ್ ದೇವಸ್ಥಾನಂ ವ್ಯವಸ್ಥಾಪಕ ಮಂಡಳಿ ಗುರುವಾರ ತಿಳಿಸಿದೆ.</p>.<p>ಚಳಿಗಾಲ ಆರಂಭಗೊಂಡ ನಂತರ ಶಿವನ ವಿಗ್ರಹವನ್ನು ಊಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗುತ್ತದೆ. ಮೇ 14ರಂದು ಶಿವನ ವಿಗ್ರಹವನ್ನು ಓಂಕಾರೇಶ್ವರ ದೇವಾಲಯದಿಂದ ಹೊರ ತೆಗೆದು, ಮೇ 17ರಿಂದ ದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಂಡಳಿಯ ವಕ್ತಾರರೊಬ್ಬರು ಹೇಳಿದರು.</p>.<p>ಈ ದೇವಸ್ಥಾನವನ್ನು ಕಳೆದ ವರ್ಷ ನವೆಂಬರ್ 16ರಂದು ಮುಚ್ಚಲಾಗಿತ್ತು.</p>.<p>ಕಳೆದ ವರ್ಷ ನವೆಂಬರ್ 19ರಂದು ಮುಚ್ಚಲಾಗಿದ್ದ ಬದರಿನಾಥ ದೇವಸ್ಥಾನವನ್ನು ಮೇ 18ರಂದು ತೆರೆಯಲಾಗುವುದು. ಗಂಗೋತ್ರಿ ಹಾಗೂ ಯಮುನೋತ್ರಿ ದೇವಾಲಯಗಳನ್ನು ಸಹ ಮೇ 14ರಂದು ಭಕ್ತರಿಗೆ ಮುಕ್ತಗೊಳಿಸಲಾಗುವುದು.</p>.<p>ಈ ನಾಲ್ಕು ದೇವಾಲಯಗಳನ್ನು ಭಕ್ತರಿಗೆ ಮುಕ್ತಗೊಳಿಸಿದ ನಂತರ ಚಾರ್ಧಾಮ್ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>