ಸುದ್ದಿಗಾರರೊಂದಿಗೆ ಮಾತನಾಡಿದ ಕಣ್ಣೂರು ನಗರ ಪೊಲೀಸ್ ಕಮಿಷನರ್ ಆರ್. ಇಳಂಗೊ, ಮಾವೋವಾದಿ ನಾಯಕ ಸಂಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತು. ಬಳಿಕ ನಾವು ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಆತ ತಮಿಳುನಾಡು ಮೂಲದ ರಾಘವೇಂದ್ರ ಆಗಿದ್ದು, ಆತನ ಬಳಿ ಎರಡು ಆಧಾರ್ ಕಾರ್ಡ್ಗಳಿವೆ. ಈತ ಎನ್ಐಎಗೆ ಬೇಕಾಗಿರುವ ವ್ಯಕ್ತಿ ಎಂಬುದು ವಿಚಾರಣೆಯಲ್ಲಿ ತಿಳಿದಿದೆ. ತಕ್ಷಣ ನಾವು ಎನ್ಐಎಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ತನಿಖಾ ತಂಡವು ಅವರನ್ನು ತಮ್ಮ ವಶಕ್ಕೆ ಪಡೆದಿದೆ' ಎಂದು ಹೇಳಿದರು.