ಪಾರ್ಥ ಚಟರ್ಜಿ ಅವರನ್ನು ಸಚಿವ ಸಂಪುಟದಿಂದ ಉಚ್ಚಾಟನೆ ಮಾಡಿ ಕೂಡಲೇ ಪಕ್ಷದಿಂದ ವಜಾಗೊಳಿಸಬೇಕು. ನನ್ನ ಹೇಳಿಕೆ ಸರಿಯಲ್ಲ ಎಂದಾದರೆ ನನ್ನನ್ನು ಪಕ್ಷದ ಎಲ್ಲ ಹುದ್ದೆಗಳಿಂದ ತೆಗೆದುಹಾಕುವ ಹಕ್ಕು ಪಕ್ಷಕ್ಕಿದೆ. ನಾನು ಟಿಎಂಸಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಪಕ್ಷದ ವಕ್ತಾರ ಕೂಡ ಆಗಿರುವ ಕುನಾಲ್ ಘೋಷ್ ಹೇಳಿದ್ದಾರೆ.