ನವದೆಹಲಿ: ಕುಂಭ ಮೇಳಕ್ಕಾಗಿ ಹರಿದ್ವಾರದಲ್ಲಿ ಜಮಾವಣೆಗೊಂಡಿರುವ ಜನಸಮೂಹವನ್ನು, ಒಂದೇ ಸಮನೇ ಏರುತ್ತಿರುವ ಕೋವಿಡ್ ಪ್ರಕರಣಗಳ ಕಾರಣ ತೆರವುಗೊಳಿಸುವಂತೆ ಕೇಂದ್ರ ಮತ್ತು ಇತರ ಆಡಳಿತ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಮೇಳದಿಂದ ಹಿಂತಿರುಗುವ ಯಾತ್ರಿಗಳಿಗೆ ಸುರಕ್ಷತಾ ಕ್ರಮಗಳ ಮಾರ್ಗಸೂಚಿ ನಿಗದಿಪಡಿಸುವಂತೆಯೂ ಈ ಅರ್ಜಿಯಲ್ಲಿ ಕೋರಲಾಗಿದೆ.