ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LIVE– 75ನೇ ಸ್ವಾತಂತ್ರ್ಯ ಸಂಭ್ರಮ| ಆತ್ಮನಿರ್ಭರ ಭಾರತ ಜನಾಂದೋಲನವಾಗಲಿ ಎಂದ ಪ್ರಧಾನಿ
LIVE

ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ತೇಲಾಡುತ್ತಿದೆ. ‘ಪ್ರತಿ ಮನೆಗೂ ತ್ರಿವರ್ಣ ಧ್ವಜ’ ಅಭಿಯಾನದಿಂದಾಗಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದೆಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪು ಕೋಟೆ ಮೇಲೆ ಸತತ 9ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಪ್ರಧಾನಿ ಭಾಷಣದ ಅಪ್ಡೇಟ್‌ ಇಲ್ಲಿ ಸಿಗಲಿದೆ.
Last Updated 15 ಆಗಸ್ಟ್ 2022, 3:45 IST
ಅಕ್ಷರ ಗಾತ್ರ
03:4515 Aug 2022

ಭಾಷಣ ಮುಕ್ತಾಯಗೊಳಿಸಿದ ಪ್ರಧಾನಿ

03:4215 Aug 2022

ಎರಡು ಸವಾಲುಗಳಿವೆ ಎಂದ ಪ್ರಧಾನಿ

ದೇಶದ ಮುಂದಿರುವ ಎರಡು ದೊಡ್ಡ ಸವಾಲುಗಳೆಂದರೆ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ. ಇವುಗಳ ವಿರುದ್ಧದ ಹೋರಾಟದಲ್ಲಿ ನಾನು ಎಲ್ಲಾ ಭಾರತೀಯರ ಬೆಂಬಲವನ್ನು ಕೋರುತ್ತೇನೆ.

ಭ್ರಷ್ಟಾಚಾರವು ಗೆದ್ದಲಿನ ಹಾಗೆ ದೇಶವನ್ನು ಹಾಳು ಮಾಡುತ್ತಿದೆ. ದೇಶವು ಅದರ ವಿರುದ್ಧ ಹೋರಾಡಬೇಕಾಗಿದೆ.

ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿನ ನಮ್ಮ ಅದ್ಭುತ ಪ್ರದರ್ಶನವು, ಭಾರತದ ಮಿನುಗುವ ಪ್ರತಿಭೆಗೆ ಉದಾಹರಣೆಗಳಾಗಿವೆ. ನಾವು ಅಂತಹ ಪ್ರತಿಭೆಗಳನ್ನು ಉತ್ತೇಜಿಸಬೇಕು. 

ದೇಶವನ್ನು ಲೂಟಿ ಮಾಡಿದರಿಂದಲೇ, ದೇಶಕ್ಕೆ ಮರುಪಾವತಿ ಮಾಡಿಸುವ ನಿಟ್ಟಿನಲ್ಲೇ ನಮ್ಮ ಪ್ರಯತ್ನ ನಡೆದಿದೆ. 

ಕೋಟಿ ಸಮಸ್ಯೆಗಳಿದ್ದರೂ, ಕೋಟಿ ಪರಿಹಾರಗಳಿವೆ. 130 ಕೋಟಿ ಜನರು ಒಂದು ಹೆಜ್ಜೆ ಮುಂದಿಟ್ಟರೆ, ದೇಶವು 130 ಕೋಟಿ ಹೆಜ್ಜೆಗಳನ್ನು ಮುಂದಕ್ಕಿಟ್ಟಂತೆ. 

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆರಂಭವಾಗಿದೆ. ಅದರ ಫಲಿತಾಂಶಕ್ಕಾಗಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯವಾಗಿದೆ. ಇದೇ ‘ಟೀಮ್ ಇಂಡಿಯಾ'ಗೆ ಕರೆ ಎಂದು ಮೋದಿ ಹೇಳಿದ್ದಾರೆ. 

03:3515 Aug 2022

ಪರಿವಾರವಾದದ ಬಗ್ಗೆ ಆತಂಕ

ಕಾನೂನು, ಶಿಕ್ಷಣ, ವಿಜ್ಞಾನ ಮತ್ತು ಪೋಲೀಸ್‌ ಇಲಾಖೆಯಲ್ಲಿನ 'ನಾರಿ ಶಕ್ತಿ'ಯನ್ನು ಗಮನಿಸಿದರೆ ನಮ್ಮ ಹೆಣ್ಣುಮಕ್ಕಳು ಮತ್ತು ತಾಯಂದಿರು ಭಾರತಕ್ಕೆ ಪ್ರಮುಖ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂಬುದು ತಿಳಿಯಲಿದೆ. 

ರಾಜ್ಯಗಳ ನಡುವೆ ‘ಸಹಕಾರಿ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆ’ಯನ್ನು ಉತ್ತೇಜಿಸುವ ಅವಶ್ಯಕತೆಯಿದೆ.

ಭಾರತ ಬಡತನದ ವಿರುದ್ಧ ಹೋರಾಡುತ್ತಿವೆ. ಹೀಗಾಗಿ ಭ್ರಷ್ಟಾಚಾರದ ವಿರುದ್ಧವೂ ನಾವು ನಮ್ಮೆಲ್ಲ ಶಕ್ತಿಯಿಂದ ಹೋರಾಡಬೇಕಾಗಿದೆ. 

ನಮಗೆ ಹಲವು ಸವಾಲುಗಳು, ಹಲವು ನಿರ್ಬಂಧಗಳು, ಹಲವು ಸಮಸ್ಯೆಗಳಿವೆ ಆದರೆ ನವ ಭಾರತಕ್ಕಾಗಿ ಅವುಗಳನ್ನು ಜಯಿಸುವ ಸಾಮರ್ಥ್ಯ ನಮಗಿದೆ: ಪ್ರಧಾನಿ

ರಾಜ್ಯಗಳು ಒಟ್ಟಿಗೆ ಕೆಲಸ ಮಾಡಬೇಕು. ನಾವು ವಿಭಿನ್ನ ಕಾರ್ಯಕ್ರಮಗಳನ್ನು ಹೊಂದಿರಬಹುದು, ಆದರೆ, ವಿಭಿನ್ನ ರಾಷ್ಟ್ರದ ಕನಸುಗಳನ್ನು ಹೊಂದಿಲ್ಲ. 

'ಪರಿವಾರವಾದ' (ಸ್ವಜನಪಕ್ಷಪಾತ) ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಕೆಲವರು ತಮ್ಮ ಅಕ್ರಮ ಸಂಪತ್ತನ್ನು ರಕ್ಷಿಸಿಕೊಳ್ಳುವ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಕಳೆದ 8 ವರ್ಷಗಳಲ್ಲಿ ಆಧಾರ್, ಡಿಬಿಟಿ, ಮೊಬೈಲ್ ಬಳಸಿ ₹2 ಲಕ್ಷ ಕೋಟಿ ಕಪ್ಪುಹಣ ಪತ್ತೆ ಮಾಡಲಾಗಿದೆ. 

ಭ್ರಷ್ಟರು ಹಾಗೂ ಭ್ರಷ್ಟಾಚಾರದ ವಿರುದ್ಧ ನಾವು ಎಚ್ಚರದಿಂದಿರಬೇಕು. 

ಭ್ರಷ್ಟರಿಗೆ ಶಿಕ್ಷೆ ವಿಧಿಸುವ ಮನಸ್ಥಿತಿ ಜನರಲ್ಲಿ ಇಲ್ಲದಿದ್ದರೆ, ದೇಶವು ಗರಿಷ್ಠ ವೇಗದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. 

ನಮ್ಮ ಅನೇಕ ಸಂಸ್ಥೆಗಳು ಕುಟುಂಬ ಆಡಳಿತದಿಂದ ಪ್ರಭಾವಿತವಾಗಿವೆ. ಇದು ನಮ್ಮ ಪ್ರತಿಭೆ, ರಾಷ್ಟ್ರದ ಸಾಮರ್ಥ್ಯಕ್ಕೆ ದಕ್ಕೆಯುಂಟು ಮಾಡಲಿದೆ. ಅಲ್ಲದೇ ಭ್ರಷ್ಟಾಚಾರಕ್ಕೆ ಕಾರಣವಾವಾಗಲಿದೆ ಎಂದು ಮೋದಿ ಹೇಳಿದರು. 
 

03:2715 Aug 2022

ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು,  ಡ್ರೋನ್ ತಯಾರಿಕೆಯಿಂದ ನೈಸರ್ಗಿಕ ಕೃಷಿ ಮಾಡು ವರೆಗೆ, ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಪ್ರಗತಿ ಸಾಧಿಸುತ್ತಿದೆ.

ನೈಸರ್ಗಿಕ ಕೃಷಿ ಭಾರತಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ. ಹಸಿರು ಉದ್ಯೋಗಗಳ ಸೃಷ್ಟಿಯೊಂದಿಗೆ ಬಹು ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. 

ಡಿಜಿಟಲ್ ತಂತ್ರಜ್ಞಾನದ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. 

5G, ಚಿಪ್ ತಯಾರಿಕೆ, ಡಿಜಿಟಲ್ ಇಂಡಿಯಾದ ಮೂಲಕ ತಳಮಟ್ಟದಲ್ಲಿ ಕ್ರಾಂತಿಯನ್ನು ತರುತ್ತಿದ್ದೇವೆ.

ಭಾರತದ ಕೈಗಾರಿಕಾ ಬೆಳವಣಿಗೆಯು ತಳಮಟ್ಟದಿಂದ ಆಗಬೇಕಾಗಿದೆ. ನಮ್ಮ ಎಂಎಸ್‌ಎಂಇಗಳು, ಬೀದಿ ವ್ಯಾಪಾರಿಗಳು ಮತ್ತು ಸಂಘಟಿತ ವಲಯದಲ್ಲಿರುವವರನ್ನು ಬಲಪಡಿಸಬೇಕಾಗಿದೆ.

03:1815 Aug 2022

ಉತ್ಪಾದನಾ ರಂಗದಲ್ಲಿ ಇತಿಹಾಸ ಸೃಷ್ಟಿಸುತ್ತಿರುವ ಭಾರತ

ಕೆಂಪು ಕೋಟೆಯ ‘ಗನ್‌ ಸಲ್ಯೂಟ್‌’ಗೆ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ತಯಾರಿಸಿದ ಬಂದೂಕು ಬಳಸಲಾಗಿದೆ. 

ಭಾರತವು ಉತ್ಪಾದನಾ ರಂಗದಲ್ಲಿ ಇತಿಹಾಸ ನಿರ್ಮಿಸುತ್ತಿದೆ. 

ಆಮದು ಮಾಡಿಕೊಂಡ ಆಟಿಕೆಗಳನ್ನು ನಿರಾರಿಸಿದ ಮಕ್ಕಳಿಗೆ ನನ್ನದೊಂದು ಸಲಾಮು. 5 ವರ್ಷದ ಮಗುವೊಂದು ವಿದೇಶಿ ವಸ್ತು ಬೇಡವೆಂದಿತು ಎಂದರೆ 'ಆತ್ಮನಿರ್ಭರ ಭಾರತ' ನಮಲ್ಲಿ ರಕ್ತಗತವಾಗಿದೆ ಎಂದರ್ಥ. 

ಪಿಎಲ್‌ಐ ಯೋಜನೆಗಳ ಮೂಲಕ ನಾವು ಪ್ರಪಂಚದ ಉತ್ಪಾದನಾ ಶಕ್ತಿಯಾಗಿ ಮಾರ್ಪಾಡು ಹೊಂದುತ್ತಿದ್ದೇವೆ. 'ಮೇಕ್ ಇನ್ ಇಂಡಿಯಾ' ಯೋಜನೆಯಲ್ಲಿ ಪಾಲ್ಗೊಳ್ಳಲು ಜನ ಭಾರತಕ್ಕೆ ಬರುತ್ತಿದ್ದಾರೆ. 

ಆತ್ಮನಿರ್ಭರ ಭಾರತ ಉಪಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಲು ಖಾಸಗಿ ವಲಯಕ್ಕೆ ಮೋದಿ ಕರೆ ನೀಡಿದರು. ಭಾರತವು ಜಗತ್ತಿಗಾಗಿ ಉತ್ಪಾದನೆ ಮಾಡುವಷ್ಟು ಶಕ್ತವಾಗಿದೆ ಎಂದು ಅವರು ಹೇಳಿದರು. 

03:1115 Aug 2022

ಆತ್ಮನಿರ್ಭರ ಭಾರತ ಜನಾಂದೋಲನವಾಗಲಿ

'ಆತ್ಮನಿರ್ಭರ ಭಾರತ'ಕ್ಕೆ ಒತ್ತು ನೀಡಿದ ಪ್ರಧಾನಮಂತ್ರಿ, ಈ ಕಲ್ಪನೆಯನ್ನು 'ಜನಾಂದೋಲನ’ದಂತೆ ಮುಂದುವರಿಸಿಕೊಂಡು ಹೋಗುವ ಅಗತ್ಯ ಪ್ರತಿಪಾದಿಸಿದ್ದಾರೆ. 

03:0715 Aug 2022

‘ಭಾರತ ಮೊದಲು’ ಎಂಬ ಮೂಲಮಂತ್ರ ಪ್ರತಿಪಾದಿಸಿದ ಪ್ರಧಾನಿ

‌ಭಾರತದ ಪ್ರಗತಿಗೆ ಸಮಾನತೆ ಆಧಾರವಾಗಿದೆ. ‘ಭಾರತ ಮೊದಲು’ ಎಂಬ ಮೂಲ ಮಂತ್ರದೊಂದಿಗೆ ನಾವು ಒಟ್ಟಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಬೇಕಾಗಿದೆ. 

ನಮ್ಮ ನಡವಳಿಕೆಯಲ್ಲಿ ಅಸ್ಪಷ್ಟತೆ ನುಸುಳಿದೆ ಮತ್ತು ನಾವು ಕೆಲವೊಮ್ಮೆ ಮಹಿಳೆಯರನ್ನು ಅವಮಾನಿಸುತ್ತೇವೆ. ಇದನ್ನು ನಮ್ಮ ನಡವಳಿಕೆಯಿಂದಲೇ ಕಿತ್ತುಹಾಕುವ ಪ್ರತಿಜ್ಞೆ ಮಾಡಬಹುದೇ? ಮಹಿಳೆಯರನ್ನು ಗೌರವಿಸುವುದು ಭಾರತದ ಬೆಳವಣಿಗೆಯ ಆಧಾರವಾಗಿದೆ. ನಾವು ನಮ್ಮ 'ನಾರಿ ಶಕ್ತಿ'ಗೆ ಬೆಂಬಲ ನೀಡಬೇಕಾಗಿದೆ
 

03:0015 Aug 2022

ಪ್ರತಿಯೊಂದು ರಂಗದಲ್ಲೂ ಸುಧಾರಣೆ

ನವೀಕರಿಸಬಹುದಾದ ಇಂಧನದಿಂದ ಹಿಡಿದು,  ವೈದ್ಯಕೀಯ ಶಿಕ್ಷಣಕ್ಕಾಗಿ ಉತ್ತಮ ಮೂಲಸೌಕರ್ಯಗಳವರೆಗೆ... ಭಾರತವು ಪ್ರತಿಯೊಂದು ರಂಗದಲ್ಲೂ ಸುಧಾರಣೆ ಸಾಧಿಸಿದೆ. 

ಕೆಲವೊಮ್ಮೆ ನಮ್ಮ ಪ್ರತಿಭೆ ಭಾಷೆಯ ಅಡೆತಡೆಗಳು ಎದುರಾಗುತ್ತವೆ. ಆದರೆ,  ನಮ್ಮ ದೇಶದ ಪ್ರತಿಯೊಂದು ಭಾಷೆಯ ಬಗ್ಗೆ ನಾವು ಹೆಮ್ಮೆಪಡಬೇಕು

ಪ್ರಕೃತಿಯು ಭಾರತದ ಪರಂಪರೆಯ ಪ್ರಮುಖ ಭಾಗವಾಗಿದೆ. ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಾಯ ಮಾಡುವ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ನಾವು ಈಗಾಗಲೇ ಹೊಂದಿದ್ದೇವೆ.

02:5415 Aug 2022

‘ದೇಶದ ಅಭಿವೃದ್ಧಿಗೆ 25 ವರ್ಷ ಮುಡಿಪಿಡಿ’

ದೇಶದ ಅಭಿವೃದ್ಧಿಗಾಗಿ ಯುವಕರು ತಮ್ಮ ಜೀವನದ ಮುಂದಿನ 25 ವರ್ಷಗಳನ್ನು ಮುಡಿಪಾಗಿಡಬೇಕು ಎಂದು ನಾನು  ಒತ್ತಾಯಿಸುತ್ತೇನೆ. – ಮೋದಿ 

02:5015 Aug 2022

2047ಕ್ಕೆ 5 ಪ್ರತಿಜ್ಞೆ

2047 ರ ವೇಳೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಾಗರಿಕರು 5 ಪ್ರತಿಜ್ಞೆ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು. 
ಅಭಿವೃದ್ಧಿ ಹೊಂದಿದ ಭಾರತ, ದಾಸ್ಯದ ಸಂಕೇತಗಳನ್ನು ತೊಡೆದುಹಾಕುವುದು, ಪರಂಪರೆಯಲ್ಲಿ ಹೆಮ್ಮೆ ಹೊಂದುವುದು, ಏಕತೆ ಮತ್ತು ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದೇ ಆ ಐದು ಪ್ರತಿಜ್ಞೆಗಳು ಎಂದು ಮೋದಿ ಹೇಳಿದರು.