ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಧಕಡ್, ‘ಪ್ರಧಾನ ಮಂತ್ರಿ ಆವಾಸ್ ಯೋಜನೆ ಕುರಿತು ಮಾಹಿತಿ ಕೇಳಿದ್ದೆ. ಇದನ್ನು ಪಡೆಯಲು ₹25,000 ಪಾವತಿಸಬೇಕೆಂದು ಹೇಳಿದ್ದರು. ಅದರಂತೆ ಪರಿಚಯಸ್ಥರಿಂದ ಸಾಲ ಮಾಡಿ ಹಣವನ್ನೂ ನೀಡಿದ್ದೆ. ಆದಾಗ್ಯೂ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಈ ಕುರಿತು ಗ್ವಾಲಿಯರ್ ನಗರಾಡಳಿತ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದೆ. ಅವರು ಮಾಹಿತಿ ಒದಗಿಸುವಂತೆ ಆದೇಶ ನೀಡಿದರು. ಎರಡು ತಿಂಗಳ ಕಾಲ ಓಡಾಡಿದ ನಂತರ ಮಾಹಿತಿ ದಾಖಲೆಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದರು. ಕೊನೆಗೂ ಮಾಹಿತಿ ಲಭ್ಯವಾದ ಸಂಭ್ರಮದಲ್ಲಿ ಡೋಲು ಬಡಿದುಕೊಂಡು, ಎತ್ತಿನ ಬಂಡಿ ಏರಿ ಬಂದೆ’ ಎಂದರು.