‘ಸೋಮವಾರ ಸಂತ್ರಸ್ತ ಭಕ್ತೆ ದೂರು ನೀಡಿದ್ದಾರೆ. ಸಂತ್ರಸ್ತೆಗೆ ಮದುವೆಯಾಗಿ ಹಲವು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ವೇಳೆ, ಸ್ವಾಮಿ ವೈರಾಗ್ಯಾನಂದ ಗಿರಿಯನ್ನು ಭಕ್ತೆ ಭೇಟಿ ಮಾಡಿದ್ದಾರೆ. ಕೆಲವು ಪೂಜೆಗಳನ್ನು ಮಾಡಿಸುವುದರಿಂದ ಮಕ್ಕಳಾಗುತ್ತವೆ ಎಂಬ ಭರವಸೆಯನ್ನುಸ್ವಾಮಿ ವೈರಾಗ್ಯಾನಂದ ಭಕ್ತೆಗೆ ನೀಡಿದ್ದಾನೆ. ನಂತರ ಆರೋಪಿಯು ಜುಲೈ 17ರಂದು ಪೂಜೆಯ ವೇಳೆ ಭಕ್ತೆಗೆ ಪ್ರಜ್ಞೆ ತಪ್ಪಿಸುವ ನೈವೇದ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ’ ಎಂದೂ ಅವರು ಹೇಳಿದರು.