ಇಂದೋರ್ನ ವಿಶೇಷ ತಂಡ ಸ್ಫೋಟಕಗಳನ್ನು ಬಳಸಿ ಹೋಟೆಲ್ ಕಟ್ಟಡ ಧ್ವಂಸಗೊಳಿಸಿದೆ. ಕೆಲವೇ ಸೆಕೆಂಡುಗಳಲ್ಲಿ ಕಟ್ಟಡ ನೆಲಸಮವಾಯಿತು.
ಸಾಗರ್ ಜಿಲ್ಲಾಧಿಕಾರಿ ದೀಪಕ್ ಆರ್ಯ, ಡಿಐಜಿ ತರುಣ್ ನಾಯಕ ಸೇರಿದಂತೆ ಇತರೆ ಅಧಿಕಾರಿಗಳು ಕಾರ್ಯಾಚರಣೆಗೆ ನೇತೃತ್ವ ವಹಿಸಿದರು.
ಸುರಕ್ಷತೆಯ ದೃಷ್ಟಿಯಿಂದ ಹೋಟೆಲ್ನ ಸುತ್ತಲೂ ಬ್ಯಾರಿಕೇಡ್ ಆಳವಡಿಸಲಾಗಿತ್ತು. ಹೋಟೆಲ್ ಸುತ್ತುಮುತ್ತಲಿನ ಕಟ್ಟಡಗಳಲ್ಲಿ ವಾಸಿಸುವ ಜನರನ್ನು ಎಚ್ಚರಿಸಲಾಗಿತ್ತು. ಎಲ್ಲವೂ ಸಮರ್ಪಕವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಗದೀಶ್ ಯಾದವ್ ಹತ್ಯೆ ಪ್ರಕರಣದಲ್ಲಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮಿಶ್ರಿಚಂದ್ ಗುಪ್ತಾ ತಲೆಮರೆಸಿದ್ದಾರೆ.
MP: Hotel of BJP leader, accused of murder razed with dynamites in Sagar