ವಂಚನೆ ಪ್ರಕರಣದಲ್ಲಿ ಗೆಹ್ಲೋಟ್ ಪುತ್ರ ವೈಭವ ಗೆಹಲೋತ್ ಸೇರಿದಂತೆ 14 ಮಂದಿ ವಿರುದ್ಧ ಕಳೆದ ವಾರ ನಾಸಿಕ್ನ ಗಂಗಾಪುರ ಪೊಲೀಸ್ ಠಾಣೆಗೆ ಉದ್ಯಮಿ ಸುಶೀಲ್ ಪಾಟೀಲ್ ದೂರು ನೀಡಿದ್ದರು. ಇಷ್ಟೂ ಮಂದಿ ಮೇಲೆ ಎಫ್ಐಆರ್ ಕೂಡ ದಾಖಲಾಗಿತ್ತು. ಇದೀಗ ದೂರುದಾರ ಪಾಟೀಲ್, ಪ್ರಕರಣದ ಮುಖ್ಯ ಆರೋಪಿ, ಗುಜರಾತ್ನ ಕಾಂಗ್ರೆಸ್ ಕಾರ್ಯಕರ್ತ ಸಚಿನ್ ವಲೇರಾ ಅವರಿಂದ ತಪ್ಪುತಿಳಿವಳಿಕೆ ಉಂಟಾಗಿ ವೈಭವ್ ಅವರ ಹೆಸರನ್ನು ದೂರಿನಲ್ಲಿ ಸೇರಿಸಿದ್ದೆ. ಅವರ ಹೆಸರನ್ನು ಕೈಬಿಡಿ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.