ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಪ್ರಕರಣ: ರಾಜಸ್ಥಾನ ಸಿಎಂ ಪುತ್ರನ ಹೆಸರು ಕೈ ಬಿಡಲು ಕೋರಿದ ದೂರುದಾರ

Last Updated 23 ಮಾರ್ಚ್ 2022, 10:40 IST
ಅಕ್ಷರ ಗಾತ್ರ

ಮುಂಬೈ: ತಾವೇ ದೂರು ನೀಡಿದ್ದ ವಂಚನೆ ಪ್ರಕರಣದಲ್ಲಿ ರಾಜಸ್ಥಾನದ ಸಿಎಂ ಅಶೋಕ್‌ ಗೆಹಲೋತ್ ಅವರ ಪುತ್ರನ ಹೆಸರು ಕೈ ಬಿಡುವಂತೆ ಉದ್ಯಮಿಯೊಬ್ಬರು ಮನವಿ ಮಾಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಗೆಹ್ಲೋಟ್‌ ಪುತ್ರ ವೈಭವ ಗೆಹಲೋತ್ ಸೇರಿದಂತೆ 14 ಮಂದಿ ವಿರುದ್ಧ ಕಳೆದ ವಾರ ನಾಸಿಕ್‌ನ ಗಂಗಾಪುರ ಪೊಲೀಸ್‌ ಠಾಣೆಗೆ ಉದ್ಯಮಿ ಸುಶೀಲ್‌ ಪಾಟೀಲ್ ದೂರು ನೀಡಿದ್ದರು. ಇಷ್ಟೂ ಮಂದಿ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಇದೀಗ ದೂರುದಾರ ಪಾಟೀಲ್‌, ಪ್ರಕರಣದ ಮುಖ್ಯ ಆರೋಪಿ, ಗುಜರಾತ್‌ನ ಕಾಂಗ್ರೆಸ್‌ ಕಾರ್ಯಕರ್ತ ಸಚಿನ್‌ ವಲೇರಾ ಅವರಿಂದ ತಪ್ಪುತಿಳಿವಳಿಕೆ ಉಂಟಾಗಿ ವೈಭವ್‌ ಅವರ ಹೆಸರನ್ನು ದೂರಿನಲ್ಲಿ ಸೇರಿಸಿದ್ದೆ. ಅವರ ಹೆಸರನ್ನು ಕೈಬಿಡಿ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್‌ ಆಯುಕ್ತ ದೀಪಕ್‌ ಪಾಂಡೆ ಮಂಗಳವಾರ ಈ ಪ್ರಕರಣವನ್ನು ವಿತ್ತ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದರು. ಇದಕ್ಕೂ ಮುನ್ನ ನಾಸಿಕ್‌ ನ್ಯಾಯಾಲಯ ಸೂಚನೆಯಂತೆ 14 ಮಂದಿ ಮೇಲೆ ವಿವಿಧ ಐಪಿಸಿ ಕಾಲಂನಡಿ ಪ್ರಕರಣ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT