ಲೋಕಸಭೆಯ ಮುಂಗಾರು ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ಮಾತನಾಡಿದ ಅವರು ಕೋವಿಡ್ ಎರಡನೇ ಅಲೆಯ ಸಂದರ್ಭ ಸರ್ಕಾರವು ಜನರ ಬಗ್ಗೆ ಕಾಳಜಿ ವಹಿಸಿಲ್ಲ. ಆಮ್ಲಜನಕದ ಕೊರತೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇರುವ ಸಂದರ್ಭ ಸರ್ಕಾರವು ಗಂಟೆ ಬಡಿಯುವುದರಲ್ಲಿ ಮತ್ತು ದೀಪ ಬೆಳಗುವುದರಲ್ಲಿ ವ್ಯಸ್ತವಾಗಿತ್ತು ಎಂದು ಖರ್ಗೆ ದೂರಿದ್ದಾರೆ.