ಕೃಷಿ ಕಾಯ್ದೆಗಳ ರದ್ದತಿ ನಿರ್ಧಾರವು ರೈತರ ಹೋರಾಟಕ್ಕೆ ಸಂದ ಜಯ ಎಂದು ಟ್ವಿಟರ್ನಲ್ಲಿ ಬಣ್ಣಿಸಿದ್ದ ಮಮತಾ, ‘ಬಿಜೆಪಿಯು ನಿಮ್ಮನ್ನು (ರೈತರನ್ನು ಉಲ್ಲೇಖಿಸಿ) ಕ್ರೌರ್ಯದಿಂದ ನಡೆಸಿಕೊಂಡರೂ ಹೆದರದೆ ಅವಿರತ ಹೋರಾಟ ನಡೆಸಿದ ಪ್ರತಿಯೊಬ್ಬ ರೈತನಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದು ನಿಮ್ಮ ಗೆಲುವು. ಈ ಹೋರಾಟದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು’ ಎಂದು ಉಲ್ಲೇಖಿಸಿದ್ದರು.