ವಿಧಾನಸಭಾ ಚುನಾವಣೆ ವೇಳೆ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಅವರ ವಿರುದ್ಧ ಸ್ಪರ್ಧಿಸಿದ್ದ ಮಮತಾ, ಚುನಾವಣೆಯಲ್ಲಿ ಸೋತ ಹೊರತಾಗಿಯೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿಎಂ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ, ಅವರು ವಿಧಾನಸಭೆ ಸದಸ್ಯರಾಗಲೇಬೇಕಾಗಿದ್ದು, ಈ ಉಪಚುನಾವಣೆಯಲ್ಲಿ ಗೆಲ್ಲಬೇಕಾ ಪರಿಸ್ಥಿತಿ ಇದೆ.
ಬ್ಯಾನರ್ಜಿ ಅವರು ಭವಾನಿಪುರದ ನಿವಾಸಿಯೂ ಹೌದು. 2011 ಮತ್ತು 2016 ರಲ್ಲಿ ಅವರು ಎರಡು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದರು.