<p><strong>ಕೋಲ್ಕತ್ತ:</strong> ಚಂಡಮಾರುತದಿಂದ ಆಗಿರುವ ಹಾನಿಗೆ ₹20 ಸಾವಿರ ಕೋಟಿ ಪರಿಹಾರ ನೀಡಬೇಕು ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೇಡಿಕೆ ವಸ್ತುಸ್ಥಿತಿಯ ಅರಿವಿಲ್ಲದೇ ಮಾಡಿರುವುದು ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.</p>.<p>ತಾವು ಮುಂದಿಟ್ಟಿರುವ ಬೇಡಿಕೆಗೆ ವಿವರವಾದ ವರದಿ ಒಪ್ಪಿಸುವುದನ್ನು ತಪ್ಪಿಸುವ ಸಲುವಾಗಿಯೇ ಮಮತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪರಾಮರ್ಶೆ ಸಭೆಗೆ ಗೈರಾಗಿದ್ದಾರೆ ಎಂದೂ ಘೋಷ್ ಹೇಳಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/can-touch-pm-narendra-modis-feet-for-bengals-welfare-bjp-led-centre-pursuing-vendetta-politics-834384.html" itemprop="url">ಪಶ್ಚಿಮ ಬಂಗಾಳದ ಅಭಿವೃದ್ಧಿಗಾಗಿ ಮೋದಿಯವರ ಕಾಲು ಹಿಡಿಯಲೂ ಸಿದ್ಧ: ಮಮತಾ ಬ್ಯಾನರ್ಜಿ</a></p>.<p>‘ಒಡಿಶಾದವರೂ ಚಂಡಮಾರುತದ ತೀವ್ರತೆಯನ್ನು ಎದುರಿಸಬೇಕಾಗಿ ಬಂದಿತ್ತು. ಬಂಗಾಳದಲ್ಲಿ ಹಾನಿ ತಪ್ಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ ಅವರು ₹20 ಸಾವಿರ ಕೋಟಿ ಪರಿಹಾರ ಕೇಳಿದ್ದಾರೆ. ತಮ್ಮ ಅವಾಸ್ತವಿಕ ಬೇಡಿಕೆಯ ಬಗ್ಗೆ ವಿವರಣೆ ನೀಡಲು ಸಾಧ್ಯವಾಗದ ಮಮತಾ ಪ್ರಧಾನಿಯವರ ಸಭೆಗೆ ಗೈರಾಗಿದ್ದಾರೆ’ ಎಂದು ಘೋಷ್ ಹೇಳಿದ್ದಾರೆ.</p>.<p>ಪ್ರಧಾನಿಯವರಿಗೆ ಎರಡು ಪ್ರಸ್ತಾವಗಳನ್ನು ಸಲ್ಲಿಸಲಾಗಿದ್ದು, ಚಂಡಮಾರುತದಿಂದ ಹಾನಿಗೊಳಗಾಗಿರುವ ದಿಘಾ ಮತ್ತು ಸುಂದರ್ಬನ್ಸ್ ಪ್ರವಾಸಿ ತಾಣಗಳನ್ನು ಮರುರೂಪಿಸಲು ತಲಾ ₹10 ಸಾವಿರ ಕೋಟಿಯಂತೆ ಪರಿಹಾರ ಕೋರಲಾಗಿದೆ ಎಂದು ಮಮತಾ ಅವರು ಶುಕ್ರವಾರ ತಿಳಿಸಿದ್ದರು.</p>.<p><strong>ಓದಿ:</strong><a href="https://www.prajavani.net/india-news/centre-recalls-bengal-chief-secretary-after-pm-mamata-banerjee-meet-row-834279.html" itemprop="url" target="_blank">ಮಮತಾ–ಮೋದಿ ಭೇಟಿ: ಬಂಗಾಳದ ಮುಖ್ಯ ಕಾರ್ಯದರ್ಶಿಯನ್ನು ವಾಪಸ್ ಕರೆಸಿಕೊಂಡ ಕೇಂದ್ರ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಚಂಡಮಾರುತದಿಂದ ಆಗಿರುವ ಹಾನಿಗೆ ₹20 ಸಾವಿರ ಕೋಟಿ ಪರಿಹಾರ ನೀಡಬೇಕು ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೇಡಿಕೆ ವಸ್ತುಸ್ಥಿತಿಯ ಅರಿವಿಲ್ಲದೇ ಮಾಡಿರುವುದು ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.</p>.<p>ತಾವು ಮುಂದಿಟ್ಟಿರುವ ಬೇಡಿಕೆಗೆ ವಿವರವಾದ ವರದಿ ಒಪ್ಪಿಸುವುದನ್ನು ತಪ್ಪಿಸುವ ಸಲುವಾಗಿಯೇ ಮಮತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪರಾಮರ್ಶೆ ಸಭೆಗೆ ಗೈರಾಗಿದ್ದಾರೆ ಎಂದೂ ಘೋಷ್ ಹೇಳಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/can-touch-pm-narendra-modis-feet-for-bengals-welfare-bjp-led-centre-pursuing-vendetta-politics-834384.html" itemprop="url">ಪಶ್ಚಿಮ ಬಂಗಾಳದ ಅಭಿವೃದ್ಧಿಗಾಗಿ ಮೋದಿಯವರ ಕಾಲು ಹಿಡಿಯಲೂ ಸಿದ್ಧ: ಮಮತಾ ಬ್ಯಾನರ್ಜಿ</a></p>.<p>‘ಒಡಿಶಾದವರೂ ಚಂಡಮಾರುತದ ತೀವ್ರತೆಯನ್ನು ಎದುರಿಸಬೇಕಾಗಿ ಬಂದಿತ್ತು. ಬಂಗಾಳದಲ್ಲಿ ಹಾನಿ ತಪ್ಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ ಅವರು ₹20 ಸಾವಿರ ಕೋಟಿ ಪರಿಹಾರ ಕೇಳಿದ್ದಾರೆ. ತಮ್ಮ ಅವಾಸ್ತವಿಕ ಬೇಡಿಕೆಯ ಬಗ್ಗೆ ವಿವರಣೆ ನೀಡಲು ಸಾಧ್ಯವಾಗದ ಮಮತಾ ಪ್ರಧಾನಿಯವರ ಸಭೆಗೆ ಗೈರಾಗಿದ್ದಾರೆ’ ಎಂದು ಘೋಷ್ ಹೇಳಿದ್ದಾರೆ.</p>.<p>ಪ್ರಧಾನಿಯವರಿಗೆ ಎರಡು ಪ್ರಸ್ತಾವಗಳನ್ನು ಸಲ್ಲಿಸಲಾಗಿದ್ದು, ಚಂಡಮಾರುತದಿಂದ ಹಾನಿಗೊಳಗಾಗಿರುವ ದಿಘಾ ಮತ್ತು ಸುಂದರ್ಬನ್ಸ್ ಪ್ರವಾಸಿ ತಾಣಗಳನ್ನು ಮರುರೂಪಿಸಲು ತಲಾ ₹10 ಸಾವಿರ ಕೋಟಿಯಂತೆ ಪರಿಹಾರ ಕೋರಲಾಗಿದೆ ಎಂದು ಮಮತಾ ಅವರು ಶುಕ್ರವಾರ ತಿಳಿಸಿದ್ದರು.</p>.<p><strong>ಓದಿ:</strong><a href="https://www.prajavani.net/india-news/centre-recalls-bengal-chief-secretary-after-pm-mamata-banerjee-meet-row-834279.html" itemprop="url" target="_blank">ಮಮತಾ–ಮೋದಿ ಭೇಟಿ: ಬಂಗಾಳದ ಮುಖ್ಯ ಕಾರ್ಯದರ್ಶಿಯನ್ನು ವಾಪಸ್ ಕರೆಸಿಕೊಂಡ ಕೇಂದ್ರ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>