<p><strong>ಭೋಪಾಲ:</strong> ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ಸ್ವ ಇಚ್ಛೆಯಂತೆ ಆಸ್ತಿಯ ಸಮಪಾಲನ್ನು ಪತ್ನಿ ಹಾಗೂ ಸಾಕುನಾಯಿಗೆ ಉಯಿಲು ಬರೆದಿಡುವ ಮೂಲಕ ಗಮನ ಸೆಳೆದಿದ್ದಾರೆ.</p>.<p>ಮಧ್ಯ ಪ್ರದೇಶ ಚಿಂದ್ವಾರ ಚಿಲ್ಲೆಯ 50 ವರ್ಷದ ಓಂ ನಾರಾಯಣ್ ವರ್ಮಾ ಎಂಬವರೇ ತಮ್ಮ ಆಸ್ತಿಯ ಅರ್ಧ ಪಾಲನ್ನು ಸಾಕುನಾಯಿಯ ಹೆಸರಿನಲ್ಲಿ ಬರೆದಿಟ್ಟಿದ್ದಾರೆ.</p>.<p>ಬಡಿಬಾಬಾ ಗ್ರಾಮ ನಿವಾಸಿಯಾಗಿರುವ ಅವರಿಗೆ ನಾಲ್ಕು ಹೆಣ್ಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ಆದರೆ ತಮ್ಮ ಮಕ್ಕಳ ಹೆಸರಿನಲ್ಲಿ ಆಸ್ತಿ ಹಂಚುವ ಮನಸ್ಸು ಮಾಡಲಿಲ್ಲ.</p>.<p>ಉಯಿಲುನಲ್ಲಿ ಬರೆದಿಟ್ಟಿರುವ ದಾಖಲಾತಿಯ ಪ್ರಕಾರ, ಓಂ ನಾರಾಯಣ್ ವರ್ಮಾ 18 ಎಕರೆ ಜಮೀನನ್ನು ಹೊಂದಿದ್ದಾರೆ. ಅಲ್ಲದೆ ಪತ್ನಿ ಹಾಗೂ ಸಾಕುನಾಯಿಗೆ ಸಮಪಾಲು ಹಂಚಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/india-news/from-part-time-sweeper-to-panchayat-prez-a-rise-thanks-to-democracy-792431.html" itemprop="url">ಕೇರಳ: ಗ್ರಾಮ ಪಂಚಾಯಿತಿ ಕಸ ಗುಡಿಸುತ್ತಿದ್ದ ಆನಂದವಲ್ಲಿ ಈಗ ಅಲ್ಲೇ ಅಧ್ಯಕ್ಷೆ! </a></p>.<p>ಇಲ್ಲಿ ಆಸಕ್ತಿದಾಯಕ ಸಂಗತಿಯೆಂದರೆ ಶ್ವಾನದ ಮರಣದ ನಂತರ, ಈ ಸಾಕುಪ್ರಾಣಿಯನ್ನು ನೋಡಿಕೊಂಡವರಿಗೆ ಆಸ್ತಿಯ ಪಾಲು ಸೇರುತ್ತದೆ.</p>.<p>ನನ್ನ ಮಕ್ಕಳ ಮೇಲೆ ನನಗೆ ನಂಬಿಕೆಯಿಲ್ಲ, ಹಾಗಾಗಿ ನನ್ನ ಮರಣಾಂತರ ನನ್ನ ಪತ್ನಿ ಹಾಗೂ ಸಾಕುನಾಯಿ ಆಸ್ತಿಯ ಹಕ್ಕುದಾರರು ಎಂದು ಉಯಿಲು ಬರೆದಿಟ್ಟಿದ್ದೇನೆಎಂದು ಗ್ರಾಮದ ಮಾಜಿ ಸರಪಂಚ ಕೂಡಾ ಆಗಿರುವ ಓಂ ನಾರಾಯಣ್ ವರ್ಮಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೋಪಾಲ:</strong> ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ಸ್ವ ಇಚ್ಛೆಯಂತೆ ಆಸ್ತಿಯ ಸಮಪಾಲನ್ನು ಪತ್ನಿ ಹಾಗೂ ಸಾಕುನಾಯಿಗೆ ಉಯಿಲು ಬರೆದಿಡುವ ಮೂಲಕ ಗಮನ ಸೆಳೆದಿದ್ದಾರೆ.</p>.<p>ಮಧ್ಯ ಪ್ರದೇಶ ಚಿಂದ್ವಾರ ಚಿಲ್ಲೆಯ 50 ವರ್ಷದ ಓಂ ನಾರಾಯಣ್ ವರ್ಮಾ ಎಂಬವರೇ ತಮ್ಮ ಆಸ್ತಿಯ ಅರ್ಧ ಪಾಲನ್ನು ಸಾಕುನಾಯಿಯ ಹೆಸರಿನಲ್ಲಿ ಬರೆದಿಟ್ಟಿದ್ದಾರೆ.</p>.<p>ಬಡಿಬಾಬಾ ಗ್ರಾಮ ನಿವಾಸಿಯಾಗಿರುವ ಅವರಿಗೆ ನಾಲ್ಕು ಹೆಣ್ಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ಆದರೆ ತಮ್ಮ ಮಕ್ಕಳ ಹೆಸರಿನಲ್ಲಿ ಆಸ್ತಿ ಹಂಚುವ ಮನಸ್ಸು ಮಾಡಲಿಲ್ಲ.</p>.<p>ಉಯಿಲುನಲ್ಲಿ ಬರೆದಿಟ್ಟಿರುವ ದಾಖಲಾತಿಯ ಪ್ರಕಾರ, ಓಂ ನಾರಾಯಣ್ ವರ್ಮಾ 18 ಎಕರೆ ಜಮೀನನ್ನು ಹೊಂದಿದ್ದಾರೆ. ಅಲ್ಲದೆ ಪತ್ನಿ ಹಾಗೂ ಸಾಕುನಾಯಿಗೆ ಸಮಪಾಲು ಹಂಚಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/india-news/from-part-time-sweeper-to-panchayat-prez-a-rise-thanks-to-democracy-792431.html" itemprop="url">ಕೇರಳ: ಗ್ರಾಮ ಪಂಚಾಯಿತಿ ಕಸ ಗುಡಿಸುತ್ತಿದ್ದ ಆನಂದವಲ್ಲಿ ಈಗ ಅಲ್ಲೇ ಅಧ್ಯಕ್ಷೆ! </a></p>.<p>ಇಲ್ಲಿ ಆಸಕ್ತಿದಾಯಕ ಸಂಗತಿಯೆಂದರೆ ಶ್ವಾನದ ಮರಣದ ನಂತರ, ಈ ಸಾಕುಪ್ರಾಣಿಯನ್ನು ನೋಡಿಕೊಂಡವರಿಗೆ ಆಸ್ತಿಯ ಪಾಲು ಸೇರುತ್ತದೆ.</p>.<p>ನನ್ನ ಮಕ್ಕಳ ಮೇಲೆ ನನಗೆ ನಂಬಿಕೆಯಿಲ್ಲ, ಹಾಗಾಗಿ ನನ್ನ ಮರಣಾಂತರ ನನ್ನ ಪತ್ನಿ ಹಾಗೂ ಸಾಕುನಾಯಿ ಆಸ್ತಿಯ ಹಕ್ಕುದಾರರು ಎಂದು ಉಯಿಲು ಬರೆದಿಟ್ಟಿದ್ದೇನೆಎಂದು ಗ್ರಾಮದ ಮಾಜಿ ಸರಪಂಚ ಕೂಡಾ ಆಗಿರುವ ಓಂ ನಾರಾಯಣ್ ವರ್ಮಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>